ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ನಾನು ಹಿಂದೂ ಎಂದು ಹೇಳುವ ಸಿಎಂ ಡೋಂಗಿತನವಾಗಿದೆ. ರೈತರ ಕಣ್ಣಿಗೆ ಸುಣ್ಣ ಮೌಲ್ವಿಗಳ ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇಂತಹ ಬೆಣ್ಣೆ ಹಚ್ಚುವ ರಾಜಕಾರಣ ಬಿಡಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯನವರದು ಸಂತೆ ಭಾಷಣ. ಎಲ್ಲಿ ಭಕ್ತಿ ಇರುತ್ತೋ ಅಲ್ಲಿ ಹೋಗುತ್ತಾರೆ. ರಾಮ ಮಂದಿರ ಬಗ್ಗೆ ಪ್ರಶ್ನಿಸುವವರು ಮಸೀದಿಗೆ ಯಾಕೆ ಹೋಗ್ತಾರೆ? ಮನೆಯಲ್ಲಿ ನೀವು ಮಸೀದಿ ಪೂಜೆ ಮಾಡಬಹುದಲ್ವಾ ಎಂದು ಕೇಳಿದ್ದಾರೆ. ಸೂಕ್ತ ಸಮಯದಲ್ಲಿ ಹಿಂದೂಗಳು ಕಣ್ಣಿಗೆ ಸುಣ್ಣ ಹಚ್ಚುತ್ತಾರೆ ಅಂತಾ ಹೇಳಿದರು.