ಬ್ರೇಕಿಂಗ್ ನ್ಯೂಸ್
Search

ದಲಿತ ಮಹಿಳೆಗೆ ನ್ಯಾಯ ಕೊಡದ ಸರ್ಕಾರ: ಆರ್.ಅಶೋಕ್

163

ಪ್ರಜಾಸ್ತ್ರ ಸುದ್ದಿ

ಮಂಡ್ಯ: ಬೆಳಗಾವಿಯಲ್ಲಿ ಅಧಿವೇಶನ ನಡೆದ ಸಂದರ್ಭದಲ್ಲಿಯೇ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದೆ. ಜಿಲ್ಲಾ ಮಂತ್ರಿ, ಸಿಎಂ ಯಾರೂ ಘಟನಾ ಸ್ಥಳಕ್ಕೆ ಹೋಗಿ ಸಂತ್ರಸ್ತೆಗೆ ಸಾಂತ್ವಾನ ಹೇಳಲಿಲ್ಲ. ದಲಿತ ಮಹಿಳೆಗೆ ನ್ಯಾಯ ಕೊಡದ ಸರ್ಕಾರ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.

ಭ್ರೂಣಹತ್ಯೆ ಖಂಡಿಸಿ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅಧಿವೇಶನದಲ್ಲಿ ಮಹಿಳೆಯ ಮೇಲಿನ ದೌರ್ಜನ್ಯದ ಬಗ್ಗೆ ಚರ್ಚೆ ಅಜೆಂಡಾದಲ್ಲಿತ್ತು. ಸಿಎಂ ಉತ್ತರ ಕೊಡದೆ ಕಾಲಹರಣ ಮಾಡಿದರು. ಪ್ರಕರಣ ಚರ್ಚೆಗೆ ಬರುತ್ತದೆ ಎಂದು ಪಾಲಾಯನ ಮಾಡಿದರು ಎಂದು ಕಿಡಿ ಕಾರಿದರು.

ಸಂತ್ರಸ್ತೆ ಈಗ ಆಸ್ಪತ್ರೆಯಲ್ಲಿದ್ದಾರೆ. ಮುಂದೆ ಊರಲ್ಲಿ ಬದುಕುವುದು ಹೇಗೆ? ಹೀಗಿದ್ದರೂ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಲಿಲ್ಲ. ಸಭಾಪತಿಗಳು ಸಹ ಮಲತಾಯಿ ಧೋರಣೆ ತೋರಿದರು ಅಂತಾ ಆರೋಪಿಸಿದರು.




Leave a Reply

Your email address will not be published. Required fields are marked *

error: Content is protected !!