ಚನ್ನಪಟ್ಟಣ: ಸರ್ಕಾರ ಬೀಳಿಸುವ ಮೂಲಕ ರಾಜ್ಯದ ಹಿನ್ನೆಡೆಗೆ ನಾನು ಕಾರಣನಾಗುವುದಿಲ್ಲವೆಂದು ವಿಧಾನಸಭೆಯಲ್ಲಿ ಹೇಳಿದ್ದೇನೆ. ಈಗ್ಲೂ ಅದನ್ನೇ ಹೇಳುತ್ತೇನೆ ಅನ್ನೋ ರೀತಿಯಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತ್ನಾಡಿದ್ದಾರೆ.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಉಚಿತ ಲ್ಯಾಪ್ ಟಾಪ್ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತ್ನಾಡಿದ ಅವರು, ಉಮೇಶ ಕತ್ತಿ ನನ್ನ ಸ್ನೇಹಿತರು. ಅವರ ಭೇಟಿಗೆ ಮಹತ್ವ ನೀಡಬೇಕಾಗಿಲ್ಲ. ನನ್ನ ಆಸೆಗಾಗಿ ಸರ್ಕಾರವನ್ನ ಅಸ್ಥಿರಗೊಳಿಸುವುದಿಲ್ಲ ಅಂತಾ ಮಾಜಿ ಸಿಎಂ ಹೆಚ್ಡಿಕೆ ಹೇಳಿದ್ದಾರೆ.
ನಾವು ತೆಗೆದುಕೊಳ್ಳುವ ಅಭಿವೃದ್ಧಿ ಕೆಲಸದಿಂದಾಗಿ ಮುಂದಿನ ಆರು ತಿಂಗಳಲ್ಲಿ ವಿರೋಧ ಪಕ್ಷಗಳಿಗೆ ಜನರು ಬಡಿಗೆಯಲ್ಲಿ ಹೊಡೆಯುತ್ತಾರೆ ಎಂದು ಸಿಎಂ ಹೇಳಿದ್ದಾರೆ. ನಾನು ಕಾಯುತ್ತಿದ್ದೇನೆ. ಮುಂದಿನ ತಿಂಗಳು ಸಿಎಂ ಮಂಡಿಸುವ ಬಜೆಟ್ ನಲ್ಲಿ ಯಾವೆಲ್ಲ ಕ್ರಾಂತಿಕಾರಿ ಅಭಿವೃದ್ಧಿ ಮಾಡ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.