ಪ್ರಜಾಸ್ತ್ರ ಸಿನಿಮಾ ಡೆಸ್ಕ್
ಸ್ಯಾಂಡಲ್ ವುಡ್ ಅಂಗಳದಲ್ಲಿ ಓಡುವ ಕುದುರೆಗಳಲ್ಲಿ ನಟ ಧ್ರುವ ಸರ್ಜಾ ಕೂಡಾ ಒಬ್ಬರು. ನಾಲ್ಕು ಸೂಪರ್ ಹಿಟ್ ಚಿತ್ರಗಳನ್ನ ನೀಡಿರುವ ಆಕ್ಷನ್ ಪ್ರಿನ್ಸ್, ಪೊಗರು ಬಳಿಕ ದುಬಾರಿ ಅನ್ನೋ ಚಿತ್ರ ಮಾಡಬೇಕಿತ್ತು. ಆದ್ರೆ, ಅದೀಗ ನಿಂತಿದೆ. ನಿರ್ದೇಶಕ ನಂದ ಕಿಶೋರ ಜೊತೆಗಿನ ಚಿತ್ರ ಸಧ್ಯಕ್ಕೆ ನಿಂತಿದ್ದು, ಅದ್ಧೂರಿ ನಿರ್ದೇಶಕರ ಜೊತೆಗೆ ಸಿನಿಮಾ ಶುರುವಾಗಿದೆಯಂತೆ.
ಯೆಸ್, ನಿರ್ದೇಶಕ ಎ.ಪಿ ಅರ್ಜುನ ಆಕ್ಷನ್ ಕಟ್ ಹೇಳಿದ ಚಿತ್ರ ಅದ್ಧೂರಿ. ನಟ ಧ್ರುವ ಸರ್ಜಾ ಮೊದಲ ಚಿತ್ರವೇ ಸೂಪರ್ ಹಿಟ್ ಆಯ್ತು. ಇಬ್ಬರಿಗೆ ಹೆಸರು ತಂದು ಕೊಟ್ಟಿತು. ಇದೀಗ ಈ ಜೋಡಿ ಮತ್ತೆ ಒಂದಾಗ್ತಿದೆ. ದುಬಾರಿ ಚಿತ್ರದ ನಟಿ ಹಾಗೂ ನಿರ್ಮಾಪಕರೆ ಇಲ್ಲಿ ಇದ್ದಾರೆ.
ದುಬಾರಿ ಸಿನಿಮಾ ನಿಲ್ಲಿಸಿ ಮತ್ತೊಂದು ಕಥೆಯನ್ನ ಸಿನಿಮಾ ಮಾಡಲು ನಿರ್ಮಾಪಕ ಉದಯ ಕೆ. ಮೆಹ್ತಾ ರೆಡಿಯಾಗಿದ್ದಾರೆ. ಎ.ಪಿ ಅರ್ಜುನ ಪರಿಚಯಿಸಿದ ಶ್ರೀಲೀಲಾ ಇಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರ ಬರಬೇಕಿದೆ.