‘ಹಳ್ಳಿ ಹಕ್ಕಿ’ ವಿರುದ್ಧ ಬಿಜೆಪಿ ನಾಯಕರು ವೈಲೆಂಟ್

216

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿ.ಎಸ್ ಯಡಿಯೂರಪ್ಪಗೆ ವಯಸ್ಸಾಗಿದೆ. ಸಿಎಂ ಬದಲಾವಣೆ ಮಾಡಬೇಕು ಎಂದಿರುವ ಬಿಜೆಪಿ ಎಂಎಲ್ ಸಿ ಹೆಚ್.ವಿಶ್ವನಾಥ ವಿರುದ್ಧ ಬಿಜೆಪಿ ಶಾಸಕರು ಕೆಂಡ ಕಾರುತ್ತಿದ್ದಾರೆ. ಹೊನ್ನಳ್ಳಿ ಶಾಸಕಿ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಮಾತ್ನಾಡಿ,ಯಡಿಯೂರಪ್ಪಗೆ ವಯಸ್ಸಾಗಿದೆ ಅನ್ನೋ ನಿಮ್ಗೆ ಎಷ್ಟು ವಯಸ್ಸಾಗಿದೆ ಎಂದು ನೆನಪಿದ್ಯಾ ಎಂದಿದ್ದಾರೆ.

ಕಾಂಗ್ರೆಸ್ ಎಲ್ಲ ಅಧಿಕಾರ ನೀಡಿದ್ರೂ ಮೋಸ ಮಾಡಿದ್ರಿ. ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನ ನೀಡಿದ್ರೂ ಮೋಸ ಮಾಡಿದ್ರಿ. ಈಗ ಯಡಿಯೂರಪ್ಪ ವಿರುದ್ಧ. ತಾನಿದ್ದ ಪಕ್ಷದ ವಿರುದ್ಧವೇ ಮಾತ್ನಾಡುವುದು ಹೆಚ್.ವಿಶ್ವನಾಥ ಕೆಲಸ. ಬಿಜೆಪಿ ಬಗ್ಗೆ ಮಾತ್ನಾಡುವ ನೈತಿಕಥೆ ನಿಮ್ಗೇನಿದೆ ಎಂದಿದ್ದಾರೆ.

ಇನ್ನು ಎಸ್.ಆರ್ ವಿಶ್ವನಾಥ ಮಾತ್ನಾಡಿ, ಉಂಡು ಮನೆಗೆ ದ್ರೋಹ ಬಗೀತಾರೆ ಅನ್ನೋದರಲ್ಲಿ ಎರಡು ಮಾತಿಲ್ಲ. ಈ ಹಿಂದೆ ಕಾಂಗ್ರೆಸ್, ಜೆಡಿಎಸ್ ನಲ್ಲಿ ಇದ್ದಾಗ್ಲೂ ಏನು ಮಾಡಿದ್ದಾರೆ ಅನ್ನೋದು ಗೊತ್ತಿದೆ. ರೋಡಲ್ಲಿ ಬಡಬಡಾಯಿಸುತ್ತ ಹೆಚ್.ವಿಶ್ವನಾಥ ಅರೆಹುಚ್ಚನಂತರಾಗಿದ್ದಾರೆ ಅಂತಾ ಕಿಡಿ ಕಾರಿದ್ದಾರೆ.

ಶಾಸಕ ಹಾಲಪ್ಪ ಸಹ ಹೆಚ್.ವಿಶ್ವನಾಥ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹೆಚ್.ವಿಶ್ವನಾಥ ಬಗ್ಗೆ ಗೌರವ ಇತ್ತು. ಸಾಹಿತಿವೆಲ್ಲ ಓದಿಕೊಂಡಿದ್ದಾರೆ. ಇದೀಗ ಅದೆಲ್ಲವನ್ನ ಕಳೆದುಕೊಳ್ಳುತ್ತಿದ್ದಾರೆ. ಅವರು ಬಿಜೆಪಿಯಲ್ಲಿದ್ದಾರೆ ಅನ್ನೋದೆ ಮೆರೆತು ವರ್ತಿಸ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!