ಪ್ರಜಾಸ್ತ್ರ ಅಪರಾಧ ಸುದ್ದಿ
ಕಲಬುರಗಿ: ಬುಧವಾರ ತಡರಾತ್ರಿ ನಗರದ ಕಾಂಗ್ರೆಸ್ ಕಚೇರಿ ಹತ್ತಿರ ರವಿ ಪುಜಾರಿ ಎಂಬಾತನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಘಟನೆ ಗುರುವಾರ ತಿಳಿದು ಬಂದಿದೆ.
ರವಿ ಪೂಜಾರಿ ಆಶಾರಾಣಿ ಅನ್ನೋ ಯುವತಿಯನ್ನ ಪ್ರೀತಿಸ್ತಿದ್ದ. ಮದುವೆಯಾಗುವುದಾಗಿ ಹೇಳಿ ದೈಹಿಕ ಸಂಬಂಧ ಬೆಳೆಸಿದ್ದ. ಇದ್ರಿಂದ ಗರ್ಭಿಣಿಯಾದ ಯುವತಿಗೆ ಗರ್ಭಪಾತ ಮಾಡಿಸಲು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಯುವತಿ ಸಾವನ್ನಪ್ಪಿದ್ದಳು.
ಸಾವನ್ನಪ್ಪಿದ ಪ್ರೇಯಸಿಯನ್ನ ಕಾರಿನಲ್ಲಿ ತೆಗೆದುಕೊಂಡು ಹೋಗಿ ಹೈದ್ರಾಬಾದ್ ಹತ್ತಿರದಲ್ಲಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ್ದ. ಇದೆ ಕೇಸಿನಲ್ಲಿ ಜೈಲು ಸೇರಿದ್ದ. ಇತ್ತಿಚೆಗೆ ಜೈಲಿನಿಂದ ಆಚೆ ಬಂದಿದ್ದ ರವಿ ಪೂಜಾರಿಯನ್ನ ಹಳೆ ವಿಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.