ಪ್ರಜಾಸ್ತ್ರ ಸುದ್ದಿ
ಕೋಲಾರ: ರೈತರಿಗೆ ಯಾವ ಹೊತ್ತಿನಲ್ಲಿ ಸಂಕಷ್ಟ, ಅದೃಷ್ಟ ಬರುತ್ತೆ ಗೊತ್ತಾಗುವುದಿಲ್ಲ. ಹೀಗಾಗಿಯೇ ರೈತರ ಬದುಕು ಅತಂತ್ರವೆನ್ನಲಾಗುತ್ತೆ. ಶ್ರಾವಣ ಮಾಸ ಶುರುವಾದ ಮೇಲೆ ಸಾಲು ಸಾಲು ಹಬ್ಬಗಳು ಬರುತ್ತವೆ. ಹೀಗಾಗಿ ಹೂವಿಗೆ ಭಾರೀ ಬೇಡಿಕೆ ಇರುತ್ತೆ ಎಂದು ಬೆಳೆದ ರೈತರಿಗೆ ನಿರಾಸೆಯಾಗಿದ್ದು, ರಸ್ತೆಯಲ್ಲಿ ಹೂವು ಸುರಿದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಸೇವಂತಿಗೆ, ಚಂಡೂ ಹೂ, ಗುಲಾಬಿ ಹೆಚ್ಚಿಗೆ ಬೆಳೆಯಾಗಿದೆ. ಆದರೆ, ಮಾರುಕಟ್ಟೆಯಲ್ಲಿ ಹೂವಿಗೆ ಸರಿಯಾಗಿ ಬೆಲೆ ಇಲ್ಲವಾಗಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದ ಹೂವಿಗೆ ಸರಿಯಾದ ಬೆಲೆ ಸಿಗಲಿಲ್ಲವೆಂದು ರಸ್ತೆಗೆ ಸುರಿದು ಹೋಗಲಾಗಿದೆ.