ಪ್ರಜಾಸ್ತ್ರ ಸುದ್ದಿ
ಕೋಲಾರ: ಸಚಿವ ಕೆ.ಹೆಚ್ ಮುನಿಯಪ್ಪ ಹಾಗೂ ಮಾಜಿ ಸಭಾಧ್ಯಕ್ಷ ಕೆ.ಆರ್ ರಮೇಶ್ ಕುಮಾರ್ ಬಣಗಳ ನಡುವಿನ ಜಗಳದಲ್ಲಿ ಮೂರನವರಿಗೆ ಲಾಭವಾಗಿದ್ದು, ಬಿಬಿಎಂಪಿ ಮಾಜಿ ಮೇಯರ್ ಕೆ.ಸಿ ವಿಜಯಕುಮಾರ್ ಪುತ್ರ ಕೆ.ವಿ ಗೌತಮ್ ಗೆ ಟಿಕೆಟ್ ಘೋಷಿಸಲಾಗಿದೆ.
ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಕೆ.ವಿ ಗೌತಮ್ ಸೇರಿದ್ದಾರೆ. ಎಲ್.ಹನುಮಂತಯ್ಯ ಅಥವ ಗೌತಮ್ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನಿರ್ಧರಿಸಿದ್ದರು. ಆದರೆ, ಸಚಿವ ಮುನಿಯಪ್ಪ ಅಳಿಯ ಕೆ.ಜಿ ಚಿಕ್ಕಪೆದ್ದಣ್ಣಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರು. ಮುನಿಯಪ್ಪ ಕುಟುಂಬಸ್ಥರು, ಆಪ್ತರನ್ನು ಬಿಟ್ಟು ಟಿಕೆಟ್ ನೀಡಬೇಕೆಂದು ರಮೇಶ್ ಕುಮಾರ್ ಬಣ ಹೇಳಿತ್ತು. ಈಗ ಇಬ್ಬರ ನಡುವೆ ಮೂರನೆದವರಿಗೆ ಲಾಭವಾಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಲ್ಲೇಶ್ ಬಾಬು ಕಣದಲ್ಲಿದ್ದಾರೆ.