ಇಂದು ಸಂಜೆ ಜಿಲ್ಲಾ ಉಸ್ತುವಾರಿ ಮರು ಹಂಚಿಕೆ?

330

ಬೆಂಗಳೂರು: ಇಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವರ ನೇಮಕವಾಗುವ ಸಾಧ್ಯತೆತಿದೆ ಎಂದು ಹೇಳಲಾಗ್ತಿದೆ. ಹಾಲಿ ಜಿಲ್ಲಾ ಉಸ್ತುವಾರಿಗಳ ಹೊಣೆಯನ್ನ ಮರು ಹಂಚಿಕೆ ಮಾಡುವ ಮೂಲಕ ಒಂದಿಷ್ಟು ಜಿಲ್ಲೆಗಳ ಉಸ್ತುವಾರಿ ಅದಲು ಬದಲು ಆಗಲಿವೆ.

ರಾಮನಗರಕ್ಕೆ ಎಸ್.ಟಿ.ಸೋಮಶೇಖರ್, ಚಿಕ್ಕಬಳ್ಳಾಪುರಕ್ಕೆ ಡಾ. ಸುಧಾಕರ, ಹಾವೇರಿಗೆ ಬಿ.ಸಿ ಪಾಟೀಲ, ಬಳ್ಳಾರಿಗೆ ಆನಂದ ಸಿಂಗ್, ಬೆಳಗಾವಿಗೆ ರಮೇಶ ಜಾರಕಿಹೊಳಿಯನ್ನ ಉಸ್ತುವಾರಿ ಸಚಿವರನ್ನಾಗಿ ನೇಮಿಸುವ ಸಾಧ್ಯತೆಯಿದೆ. ಈ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕರೋನಾ ವಿರೋಧದ ಹೋರಾಟಕ್ಕೆ ಸಂಬಂಧಿಸಿದಂತೆ ಒಂದಿಷ್ಟು ಜಿಲ್ಲಾ ಉಸ್ತುವಾರಿ ಸಚಿವರ ಮರು ಹಂಚಿಕೆ ನಡೆಯಲಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.




Leave a Reply

Your email address will not be published. Required fields are marked *

error: Content is protected !!