ಡಿಕೆಶಿ ಮಾತಿಗೆ ಜೋಶಿ ಟಾಂಗ್

537

ಹುಬ್ಬಳ್ಳಿ: ಬಿಜೆಪಿ ನಾಯಕರಿಗೆ ಮಾಜಿ ಸಚಿವ ಡಿಕೆ ಶಿವಕುಮಾರ ಎಚ್ಚರಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಪ್ರತಿಕ್ರಿಯೆ ನೀಡಿದ್ದಾರೆ. ಅವತು ಏನು ದಾಖಲೆ ನೀಡುತ್ತಾರೋ ಈಗಲೇ ನೀಡಲಿ. ಯಾರು ಬೇಡ ಅಂದವರು ಅಂತಾ ಹೇಳಿದ್ರು.

ಉಪಚುನಾವಣೆ ನಡೆದಿದೆ ದಾಖಲೆಗಳಿದ್ದರೆ ಈಗಲೇ ಬಹಿರಂಗಪಡಿಸಲಿ. ತಮ್ಮ ಮಗಳ ಬಳಿ ಕೋಟ್ಯಾಂತರ ಹಣ ಹೇಗೆ ಬಂತು ಅನ್ನೋದನ್ನ ಡಿಕೆ ಶಿವಕುಮಾರ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ರು. ಇದೇ ವೇಳೆ ಮಹದಾಯಿ ಇತ್ಯರ್ಥ ವಿಚಾರವಾಗಿ ಡಿಕೆಶಿ ಮಾಡಿರುವ ಆರೋಪಕ್ಕೂ ಉತ್ತರಿಸಿದ ಅವರು, ಈ ಮೊದಲು ಅವರದ್ದೇ ಸರ್ಕಾರ ಇದ್ದಾಗ ವಿರೋಧ ಮಾಡಿದ್ರು. ಕಾಂಗ್ರೆಸ್ ಕೇವಲ ಚುನಾವಣೆಗಾಗಿ ಗಿಮಿಕ್ ಆರೋಪ ಮಾಡ್ತಿದೆ ಅಂತಾ ಹೇಳಿದ್ರು. ಉಪಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಲಿದೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ರು.




Leave a Reply

Your email address will not be published. Required fields are marked *

error: Content is protected !!