ಪ್ರಾಣಹಾನಿ ಬೆದರಿಕೆ ಕರೆಗಳು ಬಂದಿವೆ: ದಿಂಗಾಲೇಶ್ವರ ಸ್ವಾಮೀಜಿ

99

ಪ್ರಜಾಸ್ತ್ರ ಸುದ್ದಿ

ಹುಬ್ಬಳ್ಳಿ: ಮಾರ್ಚ್ 31ರೊಳಗೆ ಧಾರವಾಡ ಲೋಕಸಭೆಯ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ್ ಜೋಶಿ ಬದಲಾಯಿಸಬೇಕು ಎಂದು ಗಡುವು ನೀಡಲಾಗಿತ್ತು. ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳದ ಕಾರಣ ಏಪ್ರಿಲ್ 2ರ ಮುಂಜಾನೆ 10.30ಕ್ಕೆ ಧಾರವಾಡ ಲೋಕಸಭಾ ಕ್ಷೇತ್ರದ ಭಕ್ತರ ಸಭೆ ನಡೆಸಲಾಗುವುದು ಎಂದು ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದ್ದಾರೆ.

ಭಾನುವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿ ಹಲವು ನಾಯಕರು ಫೋನ್ ಮಾಡಿ ಮನವೊಲಿಸಲು ನೋಡಿದರು. ಮಾನಹಾನಿ, ಪ್ರಾಣಹಾನಿ ಬೆದರಿಕೆ ಕರೆಗಳು ಬಂದಿವೆ. ಎಷ್ಟೇ ದೊಡ್ಡ ವ್ಯಕ್ತಿ ಒತ್ತಡ ಹೇರಿದರೂ ತೆಗೆದುಕೊಂಡ ತೀರ್ಮಾನ ಬದಲಾಯಿಸಲ್ಲ. ಜೋಶಿ ದಮನಕಾರಿ ನೀತಿಯಿಂದ ಕ್ಷೇತ್ರದ ಹಲವು ಸಮುದಾಯಗಳು ನೊಂದಿವೆ. ಬಿಜೆಪಿಗೆ ಜೋಶಿ ಅನಿವಾರ್ಯ ಆದರೆ ನಮಗೆ ಜನರ ಹಿತ ಅನಿವಾರ್ಯ. ಹೀಗಾಗಿ ಪ್ರಲ್ಹಾದ್ ಜೋಶಿ ಸೋಲಿಸುವುದು ಅನಿವಾರ್ಯ ಎಂದರು.




Leave a Reply

Your email address will not be published. Required fields are marked *

error: Content is protected !!