ಪ್ರಜಾಸ್ತ್ರ ಸುದ್ದಿ
ಗದಗ: ದಿನದಿಂದ ದಿನಕ್ಕೆ ವಧು, ವರರ ಸಮಸ್ಯೆ ಹೆಚ್ಚಾಗುತ್ತಿದೆ. ಹುಡುಗರು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ರೈತರಾಗಿದ್ದರೆ ಅಥವ ಇನ್ನಿತ್ತರ ಯಾವುದೇ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದವರಿಗೆ ಅಂತವರಿಗೆ ಹುಡುಗಿ ಕೊಡುವುದು ದೂರದ ಮಾತಾಗಿದೆ. ಹೀಗಾಗಿ ಇತ್ತೀಚೆಗೆ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿರುವ ಘಟನೆಗಳು ನಡೆಯುತ್ತಿವೆ.
ಇಲ್ಲೊಬ್ಬ 28 ವರ್ಷದ ಯುವಕ ತನಗೆ ಕನ್ಯಾ ಹುಡುಕಿ ಹುಡುಕಿ ಸಾಕಾಗಿದೆ ಎಂದು ಪಿಡಿಒ ಮೂಲಕ ಸರ್ಕಾರಕ್ಕೆ ಪತ್ರ ಬರೆದಿದ್ದಾನೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಗುತ್ತಿಗೆದಾರ ಮುತ್ತು ಹೂಗಾರ, ನನಗೆ 50 ಸಾವಿರ ರೂಪಾಯಿ ಆದಾಯ ಇದೆ. ಸಹೋದರ, ಸಹೋದರಿ ಯಾರೂ ಇಲ್ಲ. ಹೀಗಿದ್ದರೂ ಹೆಣ್ಣು ಕೊಡುತ್ತಿಲ್ಲ. ಸರ್ಕಾರಿ ನೌಕರಿ ಇಲ್ಲ ಅನ್ನೋ ಕಾರಣಕ್ಕೆ ಕನ್ಯೆ ಕೊಡುತ್ತಿಲ್ಲವೆಂದು ಅಳಲು ತೋಡಿಕೊಂಡಿದ್ದಾನೆ.
ಮದುವೆಯಾಗಲು ಯಾವುದೇ ಜಾತಿಯ ವಧು ಆದರೂ ಪರವಾಗಿಲ್ಲ ಎಂದು ಮುತ್ತು ಹೂಗಾರ ಹೇಳಿದ್ದಾನೆ. ಇತನ ಮನವಿಯನ್ನು ಪಡೆದಿರುವ ಪಿಡಿಒ ಹಿರಿಯ ಅಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದಿದ್ದಾರೆ.