ಜನನಾಯಕರಿಗೆ ಮೆರವಣಿಗೆ ಖುಷಿ.. ಜನಸಾಮಾನ್ಯರಿಗೆ ಟ್ರಾಫಿಕ್ ಬಿಸಿ..

325

ಬೆಂಗಳೂರು: ಜಾಮೀನು ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾಗಿ ಬಂದಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರರನ್ನ ಅದ್ದೂರಿಯಾಗಿ ಸ್ವಾಗತಿಸಲಾಯ್ತು. ಆದ್ರೆ, ಡಿಕೆಶಿ ಬೆಂಬಲಿಗರ ಅಭಿಮಾನಕ್ಕೆ ಸಾರ್ವಜನಿಕರು ಹೈರಾಣಾಗಿ ಹೋದ್ರು.

ಕೆಂಪೇಗೌಡ ವಿಮಾನ ನಿಲ್ದಾಣದ ಬಳಿಯ ಸಾದಹಳ್ಳಿ ಗೇಟ್ ನಿಂದ ಶುರುವಾದ ರೋಡ್ ಶೋಗೆ ವಾಹನ ಸವಾರರು ಪರದಾಡಿದ್ರು. ಆಂಬ್ಯುಲೆನ್ಸ್ ಸಹ ಈ ವೇಳೆ ಟ್ರಾಫಿಕ್ ನಡುವೆ ಸಿಕ್ಕಿಹಾಕಿಕೊಂಡು ಪರದಾಡುವಂತಾಯ್ತು. ಜನನಾಯಕರಿಗೆ ಮೆರವಣಿಗೆ ಖುಷಿ. ಜನಸಾಮಾನ್ಯರಿಗೆ ಟ್ರಾಫಿಕ್ ಬಿಸಿ.

ಎಸ್ಟೀಮ್ ಮಾಲ್ ರಸ್ತೆ, ಕೆಂಪಾಪುರ, ಹೆಬ್ಬಾಳ, ನಾಗವಾರ, ಗೊರಗುಂಟೆ ಪಾಳ್ಯಕ್ಕೆ ಸಂಪರ್ಕ ಕಲ್ಲಿಸುವ ನಾಲ್ಕು ಮಾರ್ಗಗಳಲ್ಲಿ ಟ್ರಾಫಿಕ್ ಸಮಸ್ಯೆ. ಇದು ಸಿಬಿಐ, ಪ್ಯಾಲೇಸ್ ರೋಡ್ ತನಕ ಸಮಸ್ಯೆಯಾಗಿದ್ದು, ಜನರ ಗಂಟೆ ಗಟ್ಟಲ್ಲೇ ರೋಡ್ ನಡುವೆ ಸಿಕ್ಕಿಹಾಕಿಕೊಂಡು ಒದ್ದಾಡಿದ್ರು.




Leave a Reply

Your email address will not be published. Required fields are marked *

error: Content is protected !!