ತೆಲಂಗಾಣಕ್ಕೆ ಒಂದಿಂಚೂ ಭೂಮಿ ಕೊಡಲ್ಲ: ಸಿಎಂ ಬೊಮ್ಮಾಯಿ

136

ಪ್ರಜಾಸ್ತ್ರ ಸುದ್ದಿ

ರಾಯಚೂರು: ಅಭಿವೃದ್ಧಿ ಆಗದ ಹಿನ್ನೆಲೆಯಲ್ಲಿ ರಾಯಚೂರಿನ ಜನರು ತೆಲಂಗಾಣಕ್ಕೆ ಸೇರಬೇಕು ಅಂತಿದ್ದಾರೆ. ಹೀಗಾಗಿ ತೆಲಂಗಾಣಕ್ಕೆ ಸೇರಿಸಿ ಎಂದು ಹೇಳಿಕೆ ನೀಡಿದ್ದ ತೆಲಂಗಾಣ ಸಿಎಂ ಕೆ.ಸಿ ಚಂದ್ರಶೇಖರ್ ಅವರಿಗೆ ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದು, ಒಂದಿಂಚು ಭೂಮಿ ಕೊಡಲ್ಲ. ಮೊದಲು ಅವರು ತೆಲಂಗಾಣ ಉದ್ದರಿಸಲಿ ಎಂದರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಸಿಎಂ, ರಾಯಚೂರು ಅಲ್ಲ ರಾಜ್ಯದ ಒಂದಿಂಚು ಭೂಮಿ ಕೊಡಲ್ಲ. ತೆಲಂಗಾಣ ಹಿಂದುಳಿದಿದೆ ಎಂದು ಹೇಳಿ ಪ್ರತ್ಯೇಕ ರಾಜ್ಯ ಪಡೆದಿರುವ ಅವರು ಅಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಹೀಗಿರುವಾಗ ಅವರ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಟಾಂಟ್ ಕೊಟ್ಟರು.


TAG


Leave a Reply

Your email address will not be published. Required fields are marked *

error: Content is protected !!