ಬಿಗಿ ಭದ್ರತೆಯಲ್ಲಿ ದುರ್ಗಕ್ಕೆ ಬಂದ ಬಾಲಕಿಯರು

256

ಪ್ರಜಾಸ್ತ್ರ ಸುದ್ದಿ

ಚಿತ್ರದುರ್ಗ: ಮುರುಘಾಮಠದ ಸ್ವಾಮೀಜಿ ಸೇರಿದಂತೆ ಐವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಕರಣ ಸಹ ದಾಖಲಾಗಿದೆ. ಪೋಕ್ಸೋ ಅಡಿಯಲ್ಲಿ ದಾಖಲಾಗಿರುವ ಪ್ರಕರಣ ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದೆ. ಹೀಗಾಗಿ ಬಾಲಕಿಯರನ್ನು ಬಿಗಿ ಭದ್ರತೆಯಲ್ಲಿ ಚಿತ್ರದುರ್ಗಕ್ಕೆ ಕರೆದುಕೊಂಡು ಬರಲಾಗಿದೆ.

ಬೆಳಗ್ಗೆ 10 ಗಂಟೆಗೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು ಮಾಡುವ ಸಾಧ್ಯತೆಯಿದೆ. ಇದಾದ ನಂತರ ವೈದ್ಯಕೀಯ ಪರೀಕ್ಷೆ, ಸ್ಥಳ ಮಹಜರು ಮಾಡಬಹುದು. ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮಠದ ಹಾಸ್ಟೆಲ್ ನಲ್ಲಿ ಓದುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನಲ್ಲಿ ಒಡನಾಡಿ ಅನ್ನೋ ಸಂಸ್ಥೆಯ ಸಹಾಯದಿಂದ ದೂರು ದಾಖಲಿಸಿದ್ದು, ಸ್ವಾಮೀಜಿ ಸೇರಿ ಐವರ ವಿರುದ್ಧ ಎಫ್ಐಆರ್ ದಾಖಲಾಗಿದೆ.




2 thoughts on “ಬಿಗಿ ಭದ್ರತೆಯಲ್ಲಿ ದುರ್ಗಕ್ಕೆ ಬಂದ ಬಾಲಕಿಯರು

  1. ಸಂಗಮೇಶ ಎನ್ ಜವಾದಿ

    ಸಮಾಜಘಾತಕರು ಅವರ ವೈಯಕ್ತಿಕ ಹಗೆತನ ಹಾಗೂ ಶರಣರನ್ನು ಪೀಠದಿಂದ ಕೆಳಗಿಳಿಸುವ ಹುನ್ನಾರ ಇರುವ ಹಿನ್ನೆಲೆಯಲ್ಲಿ ಈ ಎಲ್ಲಾ ಬೆಳವಣಿಗೆಗಳು ನಡೆಯುತ್ತಿವೆ.
    ಕಾರಣ ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರು ಅಪ್ಪಟ್ಟ ಅಪರಂಜಿ ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ.

    Reply
    1. ಸಂಗಮೇಶ ಎನ್ ಜವಾದಿ

      ಕೆಲ ಕುತಂತ್ರಿ ಸಮಾಜದ್ರೋಹಿಗಳ ಕೈವಾಡ ಷಡ್ಯಂತ್ರದಿಂದ ಹೀಗೆಲ್ಲಾ ಬೆಳವಣಿಗೆ ಆಗುತ್ತಿದೆ…. ಇದು ತಾತ್ಕಾಲಿಕ ಎಂಬುದಂತೂ ಸತ್ಯ.

      ಸತ್ಯ ಎಂದಾದರೂ ಹೊರಗಡೆ ಬಂದೇ ಬರುತ್ತದೆ…ಆಗ ಕುತಂತ್ರಿಗಳ ನಿಜವಾದ ಬಣ್ಣ ಬಯಲಾಗಿದೆ.

      ಶಿವಮೂರ್ತಿ ಮುರುಘಾ ಶರಣರು ಸತ್ಯವಂತರು ಎಂಬುದು ಜಗಜ್ಜಾಹೀರು ಆಗೆ ಆಗುತ್ತದೆ.

      Reply

Leave a Reply

Your email address will not be published. Required fields are marked *

error: Content is protected !!