ಪ್ರಜಾಸ್ತ್ರ ಸುದ್ದಿ
ಕುಷ್ಟಗಿ: ತಾಲೂಕಿನ ಕಲಾಲಬಂಡಿಯಲ್ಲಿ ನೀರಿನ ಹಾಹಾಕಾರ ಹೆಚ್ಚಾಗಿದೆ. ಇದರಿಂದಾಗಿ ಜನರು ಬಿಂದಿಗೆ ಕುಡಿಯುವ ನೀರಿಗಾಗಿ ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಎಷ್ಟೊಂದು ಬಾರಿ ಮನವಿ ಮಾಡಿದ್ರೂ ಸ್ಪಂದಿಸ್ತಿಲ್ಲವೆಂದು ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
ಗ್ರಾಮದ ನಾಲ್ಕು ಕಡೆ ನೀರನ ಕೊಳಾಯಿಗಳಿವೆ. ಆದ್ರೆ, ಕುಡಿಯಲು ಸಿಹಿ ನೀರಿನ ಕೊಳಾಯಿ ಇಲ್ಲ. ಇದ್ರಿಂದಾಗಿ ಕನಕೊಪ್ಪ ಕೊಳಾಯಿಗೆ ಜನರು ಬಂದು ಗಂಟೆಗಟ್ಟಲೇ ನಿಲ್ಲಬೇಕಾಗಿದೆ. ಇನ್ನು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಇದು ಮುಗಿದ್ರೆ ಕೃಷ್ಣ ನದಿಯ ಮೂಲಕ ನೀರು ಸರಬರಾಜು ಮಾಡಬಹುದು ಅಂತಾರೆ ಅಧಿಕಾರಿಗಳು.
ಕೋವಿಡ್ ಹಳ್ಳಿಗಳಿಗೂ ವ್ಯಾಪಿಸಿದೆ. ಜನರು ನೀರಿಗಾಗಿ ಗುಂಪು ಗುಂಪಾಗಿ ನಿಂತುಕೊಳ್ಳುವುದು ಅಪಾಯದ ಮುನ್ಸೂಚನೆಯಾಗಿದೆ. ಆದ್ರಿಂದ, ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಗ್ರಾಮಸ್ಥರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕಿದೆ.