ಮಗನೊಂದಿಗೆ ನದಿಗೆ ಹಾರಿದ ಮಹಿಳೆ!

191

ಪ್ರಜಾಸ್ತ್ರ ಸುದ್ದಿ

ರಾಮದುರ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತವರು ಮನೆಯಿಲ್ಲದ ಪತ್ನಿಯನ್ನು ಮನವೊಲಿಸಿ ಆಕೆಯನ್ನು ಕರೆದುಕೊಂಡು ಬಂದ ಪತಿ, ಆಟೋ ಬಾಡಿಗೆಗೆ ಚಿಲ್ಲರ ತರಲು ಹೋದಾಗ ಮಗನೊಂದಿಗೆ ನದಿಗೆ ಹಾರಿದ್ದಾಳೆ. ರುದ್ರವ್ವ ಬಸವರಾಜ್ ಬನ್ನೂರು(30) ಹಾಗೂ 2 ವರ್ಷದ ಮಗ ಶಿವಲಿಂಗಪ್ಪನೊಂದಿಗೆ ನದಿಗೆ ಹಾರಿದ್ದಾಳೆ.

ರಾಮದುರ್ಗ ಪಟ್ಟಣದ ವಂಕಟೇಶ್ವರದ ದೇವಸ್ಥಾನದ ಹತ್ತಿರದಲ್ಲಿ ಹಾಯ್ದು ಹೋಗಿರುವ ಮಲಪ್ರಭಾ ನದಿಗೆ ಮಗನೊಂದಿಗೆ ಹಾರಿದ್ದಾಳೆ. ಇದನ್ನು ನೋಡಿದ ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಕಾರ್ಯಾಚರಣೆ ನಡೆಸಿದ್ದಾರೆ.

ನದಿ ಪಕ್ಕದಲ್ಲಿರುವ ಚಪ್ಪಲಿ ತನ್ನ ಪತ್ನಿಯದ್ದೆ ಎಂದು ಪತಿ ಬಸವರಾಜ್ ಹೇಳಿದ್ದಾನೆ. ಕುಟುಂಬದಲ್ಲಿನ ಸಮಸ್ಯೆಯಿಂದಾಗಿ ರುದ್ರವ್ವ ಇಡಗುಂಡಿಯಲ್ಲಿನ ತವರು ಮನೆಯಲ್ಲಿದ್ದಳು. ಪತ್ನಿಯ ಮನವೊಲಿಸಿ ಪತಿ ರಾಮದುರ್ಗಕ್ಕೆ ಕರೆದುಕೊಂಡು ಬಂದಿದ್ದ. ಆಟೋ ಬಾಡಿಗೆಗೆ ಚಿಲ್ಲರ ತರಲು ಹೋದಾಗ ಈ ದುರಂತ ಸಂಭವಿಸಿದೆ.




Leave a Reply

Your email address will not be published. Required fields are marked *

error: Content is protected !!