ಮುನಿರತ್ನ ದಿಲ್ ಖುಷ್.. ಆದ್ರೂ ಟೆನ್ಷನ್ ಇದೆ..

335

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಮತದಾರರ ಪಟ್ಟಿ ರೆಡಿ ಮಾಡಲಾಗಿತ್ತು ಎಂದು ಮುನಿರತ್ನ ಎದುರು ಸೋಲು ಅನುಭವಿಸಿದ ತುಳಿಸಿ ಮುನಿರಾಜು ಸರ್ಜಿ ಸಲ್ಲಿಸಿದ್ರು. ಅವರು ಸಲ್ಲಿಸಿದ ಅರ್ಜಿಯನ್ನ ಸುಪ್ರೀಂ ಕೋರ್ಟ್ ವಜಾ ಮಾಡಿದೆ.

ಚುನಾವಣೆ ವೇಳೆ ನಕಲಿ ಮತದಾರರ ಗುರುತಿನ ಚೀಟಿ ಸಿಕ್ಕು ಭಾರೀ ಗದ್ದಲ ಸೃಷ್ಟಿಯಾಗಿತ್ತು. ಇದರಲ್ಲಿ ಮುನಿರತ್ನ ಅವರ ಪಾತ್ರವಿದೆ. ಹೀಗಾಗಿ ಗೆದ್ದ ಅಭ್ಯರ್ಥಿಯ ಸನೀಹದಲ್ಲಿರುವ ನನ್ನನ್ನ ಜಯಶಾಲಿ ಎಂದು ಘೋಷಣೆ ಮಾಡಬೇಕೆಂದು ಬಿಜೆಪಿ ಪರಾಜಿತ ಅಭ್ಯರ್ಥಿ ತುಳಿಸಿ ಮುನಿರಾಜು ಅರ್ಜಿ ಸಲ್ಲಿಸಿದ್ರು.

ಇದೀಗ ಒಂದು ಹಂತದಲ್ಲಿ ಮುನಿರತ್ನ ದಿಲ್ ಖುಷ್ ಎನ್ನಬಹುದು. ಆದ್ರೆ, ಟಿಕೆಟ್ ಟೆನ್ಷನ್ ಮಾತ್ರ ಮುಂದುವರೆದಿದೆ. ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಮುನಿರತ್ನ ಇದೀಗ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಗಾಗಿ ಕಾಯುತ್ತಿದ್ದಾರೆ. ಹೀಗಾಗಿ ಇದೊಂದು ಟೆನ್ಷನ್ ಇದ್ದು, ಬಿಎಸ್ವೈ ಕೈ ಹಿಡಿತಾರಾ, ಕೈ ಕೊಡ್ತಾರಾ ಅನ್ನೋ ಕುತೂಹಲ ಇದೆ.




Leave a Reply

Your email address will not be published. Required fields are marked *

error: Content is protected !!