ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಬಿ.ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆಯನ್ನ ವಾಪಸ್ ಪಡೆದು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರಗೆ ನೀಡಲಾಗಿದೆ. ಈ ಸಂಬಂಧ ಅಸಮಾಧನ ವ್ಯಕ್ತವಾಗಿತ್ತು. ಹೀಗಾಗಿ ಇಂದು ಸಿಎಂ ಬಿ.ಎಸ್ ಯಡಿಯೂರಪ್ಪ ಶ್ರೀರಾಮುಲು ಹಾಗೂ ಡಾ.ಕೆ ಸುಧಾಕರ ಅವರೊಂದಿಗೆ ಮಾತ್ನಾಡಿ ಸಂಧಾನ ಸಕ್ಸಸ್ ಮಾಡಿದ್ದಾರೆ.
ಈ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು, ಡಾಕ್ಟರ್ ಆರೋಗ್ಯ ಚೆನ್ನಾಗಿ ನೋಡಿಕೊಳ್ತಾರೆ ಎನ್ನುವ ಮೂಲಕ, ಸಚಿವ ಸುಧಾಕರ ಅವರಿಗೆ ಪರೋಕ್ಷವಾಗಿ ಟಾಂಟ್ ಕೊಟ್ಟಿದ್ದಾರೆ. ಅಲ್ದೇ, ಸಮಾಜಾ ಕಲ್ಯಾಣ ಇಲಾಖೆ ಒಪ್ಪಿಕೊಂಡಿದ್ದೇನೆ. ಯಾವುದೇ ಸಮಧಾನ, ಬೇಸರವಿಲ್ಲ ಎಂದಿದ್ದಾರೆ.
ಇನ್ನು ಡಾ.ಕೆ ಸುಧಾಕರ ಮಾತ್ನಾಡಿ, ಶ್ರೀರಾಮುಲು ನಮ್ಮ ಹಿರಿಯಣ್ಣ. ಹೆಚ್ಚು ಕಡಿಮೆ ಅನ್ನೋ ಮಾತಿಲ್ಲ. ವೈದ್ಯಕೀಯ, ಆರೋಗ್ಯ ಇಲಾಖೆ ನಡುವೆ ಸಮನ್ವಯ ಸಾಧಿಸಿ ಕೆಲಸ ಮಾಡಬೇಕು ಅನ್ನೋ ನಮ್ಮ ನಾಯಕ ಸಿಎಂ ಬಿಎಸ್ವೈ ಅವರ ಮಾತನ್ನ ಪಾಲಿಸುತ್ತೇವೆ. ಈ ಹಿಂದೆ ಶ್ರೀರಾಮುಲು ಅಣ್ಣ ನಾನು ಕ್ರಿಯಾಶೀಲವಾಗಿ ಕೆಲಸ ಮಾಡಿದ್ದೇವೆ. ಮುಂದೆಯೂ ಮಾಡುತ್ತೇವೆ ಎಂದರು.