‘ಬ್ಯಾರಿ ಮುಸ್ಲಿಂರಿಂದ ದುರ್ಗಾಪರಮೇಶ್ವರಿ ದೇಗುಲ ಜೀರ್ಣೋದ್ಧಾರ’

203

ಪ್ರಜಾಸ್ತ್ರ ಸುದ್ದಿ

ಮಂಗಳೂರು: ಹಿಂದು ದೇವಸ್ಥಾನಗಳ ಸುತ್ತ ಮುಸ್ಲೀಂರು ವ್ಯಾಪಾರ ಮಾಡಬಾರದು ಎಂದು ಬಹಿಷ್ಕಾರ ಹಾಕುತ್ತಿರುವ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಮಾತನಾಡಿರುವ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿ, ಇದು ಸರಿ ಅಲ್ಲವೆಂದು ಹೇಳಿದೆ. ನಾವು ಯಾರಿಗೂ ನಿಷೇಧ ಹೇರಿಲ್ಲ. ಆವರಣದ ಹೊರಗೆ ಯಾರು ಬೋರ್ಡ್ ಹಾಕಿದ್ದಾರೋ ಗೊತ್ತಿಲ್ಲ ಎಂದು ದೇವಸ್ಥಾನ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ ಹೇಳಿದ್ದಾರೆ.

ಇನ್ನು ಸುಮಾರು 11 ವರ್ಷಗಳ ಕಾಲ ಆಡಳಿತ ಮೊಕ್ತೇಸರ ಆಗಿದ್ದ ಹರಿಕೃಷ್ಣ ಪನರೂರು ಮಾತನಾಡಿ, ಮುಸ್ಲೀಂರ ವ್ಯಾಪಾರಕ್ಕೆ ಬಹಿಷ್ಕಾರ ಹಾಕಿದ್ದು ಸರಿ ಅಲ್ಲ ಎಂದಿದ್ದಾರೆ. ಭಾರತದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಈ ದೇವಸ್ಥಾನಕ್ಕೆ ಮುಸ್ಲೀಂರು, ಕ್ರೈಸ್ತರು ಬರುತ್ತಾರೆ. ಬಪ್ಪ ಬ್ಯಾರಿ ಮುಸ್ಲೀಂರು ಈ ದೇವಸ್ಥಾನ ಜೀರ್ಣೋದ್ಧಾರ ಮಾಡಿದರು ಅನ್ನೋ ಇತಿಹಾಸವಿದೆ. ಸೌಹಾರ್ದತೆಗೆ ಅವಕಾಶ ನೀಡಬೇಕು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!