ಪ್ರಜಾಸ್ತ್ರ ಸುದ್ದಿ
ಶಿಲ್ಲಾಂಗ್: ಕೋಳಿ, ಕುರಿ, ಮೀನು ಮಾಸಕ್ಕಿಂತ ಹೆಚ್ಚು ಗೋಮಾಂಸ ತಿನ್ನಿ ಎಂದು ಬಿಜೆಪಿ ಸಚಿವ ಸಣ್ಬೂರ್ ಶುಲ್ಲೈ ಕರೆ ನೀಡಿದ್ದಾರೆ. ಮೇಘಾಲಯದ ನೂತನ ಪಶು ಸಂಗೋಪನ ಹಾಗೂ ಪಶುವೈದ್ಯ ಖಾತೆ ಸಚಿವರ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.
ಕಳೆದ ವಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಸಣ್ಬೂರ್ ಶುಲ್ಲೈ, ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೆ ಅವರಿಗೆ ಇಷ್ಟವಾದ ಆಹಾರ ಸೇವಿಸಲು ಸ್ವತಂತ್ರರು ಎಂದಿದ್ದಾರೆ. ನೆರೆಯ ಆಸ್ಸಾಂನಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರಲಾಗಿದೆ. ಇದ್ರಿಂದ ಮೇಘಾಲಯಕ್ಕೆ ಜಾನುವಾರ ಸಾಗಣೆಗೆ ಯಾವುದೇ ಸಮಸ್ಯೆಯಿಲ್ಲ. ಈ ಬಗ್ಗೆ ಸಿಎಂ ಬಿಸ್ವಾ ಶರ್ಮಾ ಜೊತೆ ಮಾತ್ನಾಡುವುದಾಗಿ ತಿಳಿಸಿದ್ದಾರೆ.