ಪ್ರಜಾಸ್ತ್ರ ಸುದ್ದಿ
ನವದೆಹಲಿ: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಇಡಿ ನೋಟಿಸ್ ನೀಡಿದೆ.
1938ರಲ್ಲಿ ನೆಹರು ನೇತೃತ್ವದಲ್ಲಿ ಲಖನೌದಲ್ಲಿ ಇಂಗ್ಲಿಷ್ ಆವೃತ್ತಿಯೊಂದಿಗೆ ಪತ್ರಿಕೆ ಶುರು ಮಾಡಲಾಯಿತು. ನಂತರ ಹಿಂದಿ ಆವೃತ್ತಿ ನವಜೀನ್, ಉರ್ದು ಆವೃತ್ತಿ ಕ್ವಾಮಿ ಆವಾಜ್ ಶುರುವಾಯಿತು. ಅಂದಿನ ಪ್ರಧಾನಿ ನೆಹರು, ನ್ಯಾಷನಲ್ ಹೆರಾಲ್ಡ್ ಸಂಸ್ಥೆಗೆ ದೆಹಲಿ, ಲಖ್ನೋ, ಭೂಪಾಲ್, ಮುಂಬೈ, ಇಂದೋರ್ ಸೇರಿದಂತೆ ಅನೇಕ ಕಡೆ ಭೂಮಿ ಮಂಜೂರು ಮಾಡಲಾಗಿತ್ತು.
ಇದರಲ್ಲಿ 5 ಸಾವಿರ ಸ್ವಾತಂತ್ರ್ಯ ಹೋರಾಟಗಾರರು ಷೇರು ಹೊಂದಿದ್ದರು. ಮುಂದೆ ನಷ್ಟ ಅನುಭವಿಸುತ್ತಾ ಬಂದಿತು. 2010ರ ವೇಲೆಗೆ ಷೇರುದಾರರ ಸಂಖ್ಯೆ 1057ಕ್ಕೆ ಇಳಿಯಿತು. ಮುಂದೆ 2012ರಲ್ಲಿ ನ್ಯಾಷನಲ್ ಹೆರಾಲ್ಡ್ ನಲ್ಲಿ ದೊಡ್ಡ ಅವ್ಯವಹಾರ ನಡೆದಿದೆ ಎಂದು ಬಿಜೆಪಿ ದೂರಿತು. ರಾಜಕೀಯ ಪಕ್ಷವೊಂದು ಮೂರನೇ ಸಂಸ್ಥೆಗೆ ಸಾಲ ನೀಡುವಂತಿಲ್ಲ. ದೇಶದ ಹಲವು ಕಡೆ ಆಸ್ತಿ ಹೊಂದಿದೆ. ಕಟ್ಟಡ ಹೊಂದಿದೆ. ಪ್ರಸ್ತುತ ಇದರ ಮೌಲ್ಯ 2 ಸಾವಿರಕ್ಕೂ ಅಧಿಕ ಕೋಟಿ ಎಂದು ಸುಬ್ರಮಣ್ಯನ್ ಸ್ವಾಮಿ ಆರೋಪಿಸಿದ್ದಾರೆ.