ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಚಿತ್ರದುರ್ಗದ ಮರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಜನ್ಮ ದಿನವಾದ ಏಪ್ರಿಲ್ 11 ಅನ್ನು ಇನ್ನು ಮುಂದೆ ಸಮಾನತೆ ದಿನವೆಂದು ಆಚರಿಸಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ದೇಶದಲ್ಲಿ ಆರ್ಥಿಕ ಅಭಿವೃದ್ಧಿ ಜೊತೆಗೆ ಆಧ್ಯಾತ್ಮಿಕ ಅಭಿವೃದ್ಧಿಯೂ ಮುಖ್ಯ. ಚರಿತ್ರೆಯೊಂದಿಗೆ ಚಾರಿತ್ರ್ಯವೂ ಮುಖ್ಯವಾಗಿದೆ ಅಂತಾ ಹೇಳಿದರು.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಮಾನತೆ ದಿನ ಒಂದು ಕಡೆ ಆಚರಿಸಲಾಗುತ್ತಿದೆ. ಆದರೆ, ಎಲ್ಲಿದೆ ಸಮಾನತೆ. ಸಮಾಜದಲ್ಲಿ ಅಶಾಂತಿ ಉಂಟಾಗಿದೆ. ಇದನ್ನು ನೋಡಿಕೊಂಡು ಮಠಾಧೀಶರು ಕಣ್ಣುಮುಚ್ಚಿಕೊಂಡಿರುವುದು ಸರಿಯಲ್ಲವೆಂದು ಹೇಳಿದರು.