ದೇಶದೆಲ್ಲೆಡೆ ತ್ಯಾಗ ಬಲಿದಾನದ ಬ್ರಕೀದ್ ಆಚರಣೆ

570

ನವದೆಹಲಿ: ದೇಶ್ಯಾದ್ಯಂತ ಇಂದು ಬಕ್ರೀದ್ ಹಬ್ಬ ಆಚರಣೆ ಮಾಡಲಾಗ್ತಿದೆ. ನಾಡಿನ ಎಲ್ಲೆಡೆಯಿರುವ ಮಸೀದಿಗಳಲ್ಲಿ ಪ್ರಾರ್ಥನೆಗಳನ್ನ ಸಲ್ಲಿಸಲಾಯ್ತು. ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ಶ್ರದ್ಧೆ ಭಕ್ತಿಯಿಂದ ಎಲ್ಲೆಡೆ ಆಚರಣೆ ಮಾಡಲಾಗ್ತಿದೆ.

ಸಾರ್ವಾಜನಿಕ ಮೈದಾನಗಳಲ್ಲಿ, ಈದ್ಗಾ ಮೈದಾನಗಳಲ್ಲಿ, ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಇಂದು ಬೆಳಗ್ಗೆಯಿಂದಲೇ ಸಾಮೂಹಿಕವಾಗಿ ಪ್ರಾರ್ಥನೆಯನ್ನ ಸಲ್ಲಿಸುವ ಮೂಲಕ ನಾಡಿನ ಒಳತಿಗಾಗಿ ಬೇಡಿಕೊಂಡರು. ಇನ್ನೂ ಶ್ರೀನಗರದಲ್ಲಿ ಸೇನಾಪಡೆಗಳ ರಕ್ಷಣೆಯಲ್ಲಿ ಮುಸ್ಲಿಂ ಬಾಂಧವರು ಪ್ರಾರ್ಥನೆ ಸಲ್ಲಿಸಿದ್ರು.

ದೆಹಲಿಯ ಪಂಜಾ ಶರೀಫ ದರ್ಗಾದಲ್ಲಿ, ಜಮಾ ಮಸೀದಿಯಲ್ಲಿ, ಬೆಂಗಳೂರಿನ ಸಾರ್ವಜನಿಕ ಸ್ಥಳಗಳಲ್ಲಿ, ಮಸೀದಿಗಳಲ್ಲಿ, ಈದ್ಗಾ ಮೈದಾನಗಳಲ್ಲಿ, ಮಧ್ಯಪ್ರದೇಶದ ಭೂಪಾಲ್ ನ ಈದ್ಗಾ ಮೈದಾನಲ್ಲಿ, ಮುಂಬೈಯನ ಹಮೀದಾ ಮಸೀದಿ ಸೇರಿದಂತೆ ದೇಶದ ತುಂಬಾ ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಲಾಗ್ತಿದೆ.

ದೇಶದ ಮುಸ್ಲಿಂ ಬಾಂಧವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಶುಭಾಶಯ ತಿಳಿಸುವ ಮೂಲಕ, ಈದ್ ನ ಜುಹಾ ಪ್ರೀತಿ, ಭಾತೃತ್ವ ಮತ್ತು ಮನವೀಯತೆಯ ಸೇವೆಯನ್ನ ಸಂಕೇಸುತ್ತದೆ ಅಂತಾ ಹೇಳಿದ್ದಾರೆ. ನಮ್ಮ ಸಂಸ್ಕೃತಿಯನ್ನ ಪ್ರತಿಬಿಂಬಿಸುವ ಹಬ್ಬಗಳಿಗೆ ನಾವು ಬದ್ಧರಾಗೋಣ ಅಂತಾ ದೇಶದ ಮೊದಲ ಪ್ರಜೆ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!