ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನದ ಪಂದ್ಯದಲ್ಲಿ ಟೀಂ ಇಂಡಿಯಾ 59ರನ್ ಗಳ ಭರ್ಜರಿ ಗೆಲುವು ದಾಖಲಿಸಿದೆ. ಕ್ವೀನ್ಸ್ ಪಾರ್ಕ್ ಓವಲ್ ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಪಡೆ ಕೆರಿಬಿಯನ್ಸ್ ಪಡೆಯನ್ನ ಬಗ್ಗು ಬಡಿಯುವ ಮೂಲಕ ಗೆಲುವು ದಾಖಲಿಸಿದೆ.
ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯಕ್ಕೂ ಮಳೆರಾಯ ಕೊಂಚ ಆಟವಾಡಿಸಿದ. ಭಾರತ 280ರನ್ ಗಳ ಗುರಿಯನ್ನ ವೆಸ್ಟ್ ಇಂಡೀಸ್ ಗೆ ನೀಡಿತ್ತು. ಮಳೆಯಿಂದಾಗಿ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ವಿಂಡೀಸ್ ತಂಡಕ್ಕೆ 46 ಓವರ್ ಗಳಲ್ಲಿ 270 ರನ್ ಗಳ ಗುರಿಯನ್ನ ನೀಡಲಾಯ್ತು.
ಭಾರತ ಭರ್ಜರಿ ಬೌಲಿಂಗ್ ನಿಂದಾಗಿ 42 ಓವರ್ ಗಳಲ್ಲಿ 210 ರನ್ ಗಳಿಗೆ ಆಲೌಟ್ ಆಗುವ ಮೂಲಕ 59 ರನ್ ಗಳಿಂದ ಸೋಲು ಅನುಭವಿಸಿತು. ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-0ದಿಂದ ಭಾರತ ಮುಂದಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿದೆ. ಮುಂದಿನ ಪಂದ್ಯವನ್ನ ಭಾರತ ಗೆದ್ದರೆ ಸರಣಿ ಕೈವಶವಾಗಲಿದೆ.
ಕೊಹ್ಲಿ 42ನೇ ಶತಕ
ಇನ್ನು ಇಂಡಿಯನ್ ಕ್ರಿಕೆಟ್ ಟೀಂನ ಕ್ಯಾಪ್ಟನ್ ವಿರಾಟ ಕೊಹ್ಲಿ ತಮ್ಮ ವೃತ್ತಿ ಜೀವನದ 42ನೇ ಶತಕವನ್ನ ಪೂರೈಯಿಸಿದ್ರು. ಈ ಮೂಲಕ ಸಚಿನ ನಂತ್ರ ಅತಿ ಹೆಚ್ಚು ಏಕದಿನ ಶತಕ ಸಿಡಿಸಿದ ಎರಡನೇ ಆಟಗಾರನಾಗಿದ್ದಾನೆ. ಈ ಮೂಲಕ ವಿರಾಟ ಕೊಹ್ಲಿ ತನ್ನ ಶತಕದ ಬೇಟೆಯನ್ನ ಮುಂದುವರೆಸಿದ್ದಾನೆ.