ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ನಿರ್ಮಾಣ ಹಂತದ ಕಟ್ಟಡದಲ್ಲಿ ವಾಚಮನ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರ ಮನೆಯಲ್ಲಿ ವಿದ್ಯುತ್ ಕಾಯಿಲ್ ಅವಗಡದಿಂದಾಗಿ ಮೂವರು ಮೃತಪಟ್ಟ ದಾರುಣ ಘಟನೆ ಶನಿವಾರ ಬೆಳಗಾವಿಯ ಶಾಹುನಗರದಲ್ಲಿ ನಡೆದಿದೆ.
3ನೇ ತರಗತಿ ವಿದ್ಯಾರ್ಥಿ ಅನ್ನಪೂರ್ಣ ರಾಠೋಡ, ಅಜ್ಜ, ಅಜ್ಜಿಯರಾದ ಈರಪ್ಪ ರಾಠೋಡ, ಶಾಂತವ್ವ ರಾಠೋಡ ಮೃತ ದುರ್ದೈವಿಗಳು. ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಕುಟುಂಬ ಪಕ್ಕದಲ್ಲಿ ತಗಡಿನ ಶೆಡ್ ನಿರ್ಮಿಸಿಕೊಂಡಿದೆ.
ಶನಿವಾರ ಮುಂಜಾನೆ ನೀರು ಕಾಯಿಸಲು ಕಾಯಿಲ್ ಹಚ್ಚಲಾಗಿದೆ. ಶೆಡ್ ಗೆ ತಾಗಿಸಿ ಕಬ್ಬಿಣದ ರಾಡ್ ಇಡಲಾಗಿದೆ. ಇದನ್ನು ಮುಟ್ಟಿದ ಪರಿಣಾಮ ಮೂವರು ಪ್ರಾಣ ಕಳೆದಕೊಂಡಿದ್ದಾರೆ.