ಚರಗಾ ಚೆಲ್ಲಿದ ರೈತ ವರ್ಗ

662

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಇಂದು ಎಲ್ಲೆಡೆ ಎಳ್ಳಾ ಅಮಾವಾಸ್ಯೆಯ ಸಂಭ್ರಮ ಸಡಗರ ಮನೆ ಮಾಡಿತ್ತು. ಒಂದು ರೀತಿಯಲ್ಲಿ ರೈತಾಪಿ ವರ್ಗದ ಹಬ್ಬವೆಂದೇ ಹೇಳಬಹುದು. ಭೂಮಿತಾಯಿಯನ್ನು ಪೂಜಿಸಿ, ಆಕೆಯ ಬಳಿ ತಮ್ಮ ಸಮೃದ್ಧಿಯ ಬಗ್ಗೆ ಬೇಡಿಕೊಳ್ಳಲಾಗುತ್ತೆ. ಇದಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಚರಗಾ ಚೆಲ್ಲುವುದು ಎಂದು ಹೇಳಲಾಗುತ್ತೆ.

ತಾಲೂಕಿನ ಗಣಿಹಾರ ಗ್ರಾಮದಲ್ಲಿನ ರೈತರು ತಮ್ಮ ಕುಟುಂಬ ಹಾಗೂ ಬಂಧು ಬಳಗದವರೊಂದಿಗೆ ಹೊಲಕ್ಕೆ ತೆರಳಿ ಪೂಜೆ ಸಲ್ಲಿಸಿದರು. ನಂತರ ಹಬ್ಬಕ್ಕೆಂದೆ ವಿಶೇಷವಾಗಿ ಮಾಡಿದ ವಿವಿಧ ರೀತಿ ಅಡುಗೆಗಳನ್ನು ಸವಿದು ಒಂದಿಷ್ಟು ಕಾಲ ಕಳೆದರು.




Leave a Reply

Your email address will not be published. Required fields are marked *

error: Content is protected !!