ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಮನ್ನಾಪುರ ಗ್ರಾಮದಲ್ಲಿರುವ ಕಬ್ಬಿನ ಗದ್ದೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ರೈತ ಶರಣಪ್ಪ ನೀಲಪ್ಪ ಬಿರಾದಾರ ಎಂಬುವರ ಹೊಲದಲ್ಲಿನ ವಿದ್ಯುತ್ ಕಂಬದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಈ ಅನಾಹುತ ನಡೆದು ಹೋಗಿದೆ.
ಜಮೀನಿನಲ್ಲಿ ಬೆಂಕಿ ಹೊತ್ತಿ ಕೊಂಡಿದ್ದ ಸುದ್ದಿ ತಿಳಿಯುತ್ತಿದಂತೆ ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿದರು. ಈ ವೇಳೆ ಅಗ್ನಿಶಾಮಕ ಸಿಬ್ಬಂದಿ ಮಚೇಂದ್ರ ಸಿಂದೆ, ಶ್ರೀಧರ ಗುಗ್ಗರಿ, ಸಂತೋಷ್ ರಾಠೋಡ, ಶಾಂತಪ್ಪ ಬಿರಾದಾರ, ಶಿವಲಿಂಗಯ್ಯ ಮಠ, ಅಶೋಕ ರಾಠೋಡ, ಶ್ರೀಧರ ರತ್ನಪ್ಪಗೊಳ ಭಾಗಿಯಾಗಿದ್ದರು.