ಬಿಎಸ್ವೈ ಆಪ್ತ ಸೇರಿ 30 ಕಾಂಟ್ರೆಕ್ಟರ್ ಮನೆಗಳ ಮೇಲೆ ಐಟಿ ದಾಳಿ

216

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಆಪ್ತ ಉಮೇಶ್ ಸೇರಿದಂತೆ 30 ಕಾಂಟ್ರೆಕ್ಟರ್ ಗಳ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೊದಲೇ ಇಂಟರ್ನಲ್ ಸರ್ವೇ ಮಾಡಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ.

ಜಲಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ 30 ಕಾಂಟ್ರೆಕ್ಟರ್ ಗಳ ಮನೆ ಮೇಲೆ ದಾಳಿ ನಡೆಸಲಾಗಿದೆ. ಇದರ ಜೊತೆಗೆ ಕಾಂಟ್ರೆಕ್ಟರ್ ಗಳಿಗೆ ಕಬ್ಬಿಣ ಸೇರಿದಂತೆ ಇತರೆ ವಸ್ತುಗಳನ್ನು ಪೂರೈಕೆ ಮಾಡಿದ್ದ ಎಂಟರ್ ಪ್ರೈಸಸ್ ಗಳ ಮೇಲೆಯೂ ದಾಳಿ ನಡೆಸಲಾಗಿದೆ. ಇನ್ನು ಗುತ್ತಿಗೆದಾರರ ಚಾರ್ಟೆಡ್ ಅಕೌಂಟೆಂಟ್ ಗಳ ಮನೆಯ ಮೇಲೂ ದಾಳಿ ನಡೆಸಲಾಗಿದೆ. ಕರೋನಾ ಸಂದರ್ಭದಲ್ಲಿಯೂ ಇವರೆಲ್ಲರ ಆದಾಯ ಶೇಕಡ 30ರಷ್ಟು ಏರಿಕೆಯಾಗಿದೆ.

ಬಿಎಸ್ವೈ ಆಪ್ತ ಉಮೇಶ್ ಈ ಹಿಂದೆ ಬಿಎಂಟಿಸಿ ಬಸ್ ಡ್ರೈವರ್ ಆಗಿದ್ದ. ನಾಗಸಂದ್ರ ಲೇಔಟ್ ಹಿಂಭಾಗದಲ್ಲಿನ ರಾಮಯ್ಯ ಲೇಔಟ್ ನಲ್ಲಿ ಇತ್ತೀಚೆಗೆ ಐಷಾರಾಮಿ ಬಂಗಲೆ ಕಟ್ಟಿಸಿದ್ದಾನೆ. ಅದಕ್ಕೆ ಬಿಎಸ್ವೈ ಮನೆ ಹೆಸರಾದ ಧವಳಗಿರಿ ಎಂದೇ ಹೆಸರು ಇಟ್ಟಿದ್ದಾನೆ.




Leave a Reply

Your email address will not be published. Required fields are marked *

error: Content is protected !!