ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಯುರೋಪ್ ಪ್ರವಾಸ ಬಳಿಕ ಕಾಂಬೋಡಿಯಾಗೆ ಪ್ರಯಾಣಿಸಿದ್ದ ಮಾಜಿ ಹೆಚ್.ಡಿ ಕುಮಾರಸ್ವಾಮಿ ಅವರು ವಾಪಸ್ ಬಂದಿದ್ದೇ ತಡ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ವಿದೇಶದಲ್ಲೇ ಉಳಿದುಕೊಳ್ಳಲಿ ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಕೆಲ ಸಚಿವರು ಬಿಟ್ಟಿ ಸಲಹೆ ನೀಡುತ್ತಿದ್ದಾರೆ. ರಾಜ್ಯದ ಜನತೆಯ ಹಣ ಲೂಟಿ ಮಾಡುತ್ತಿರುವ ಇವರಿಗೆ ಮಾನ ಮರ್ಯಾದೆ ಇದೆಯಾ ಎಂದು ಕಿಡಿ ಕಾರಿದರು.
ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಹೆಚ್ಡಿಕೆ, ಅವರ ತಮಗೆ ಬೇಕಾದಂತೆ ಇರಲು ನಮಗೆ ವಿದೇಶಕ್ಕೆ ಕಳಿಸಲು ನೋಡುತ್ತಿದ್ದಾರೆ. ಪಾಪದ ಹಣ ತೆಗೆದುಕೊಂಡು ನಾನು ಹೋಗಬೇಕೇ? ಸಚಿವ ಚಲುವರಾಯಸ್ವಾಮಿ ಕಮಿಷನ್ ತೆಗೆದುಕೊಂಡ ಬಗ್ಗೆ ರಾಜ್ಯಪಾಲರಿಗೆ ಪತ್ರ ಹೋಗಿದ್ದು ಹೇಗೆ? ಈ ಬಗ್ಗೆ ನಾನು ಪ್ರಸ್ತಾಪನೇ ಮಾಡಿಲ್ಲ. ಆದರೂ ನನ್ನ ಹೆಸರು ತೆಗೆಯುತ್ತಾರೆ ಅಂದರೆ ಅವರಿಗೆ ಭಯವಿದೆ ಅಂತಾ ಕಾಲೆಳೆದರು.