ಬೆಂಗಳೂರು: ಜ್ಞಾನಪೀಠ ಪುರಸ್ಕೃತ, ಹಿರಿಯ ನಾಟಕಕಾರ ಡಾ.ಗಿರೀಶ್ ಕಾರ್ನಾಡ್ ಅವರ ಸಾವನ್ನ ಸಂಭ್ರಮಿಸಿದ ವಿಕೃತ ಮನಸ್ಸುಗಳ ವಿರುದ್ಧ ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾವನ್ನ ಸಂಭ್ರಮಿಸುವುದು ಕೊಲೆಯಷ್ಟೇ ಘೋರ ಅಂತಾ ಕಟು ಮಾತುಗಳ ಮೂಲಕ ಹೇಳಿದ್ದಾರೆ. ಟ್ವೀಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಅವರು, ಅದು ಕಾರ್ನಾಡರದ್ದಾಗಲಿ, ಕಾಂಗ್ರೆಸಿಗನದ್ದಾಗಲಿ, ಬಿಜೆಪಿಯವರದ್ದಾಗಲಿ. ಸೈದ್ದಾಂತಿಕ ವಿರೋಧಕ್ಕಾಗಿ ಯಾರೂ ಸಾವು ಸಂಭ್ರಮಿಸುವಷ್ಟು ಶತ್ರಗಳಾಗಬಾರದು ಅಂತಾ ಹೇಳಿದ್ದಾರೆ.