ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕೋವಿಡ್ 19ಗೆ ಸಂಬಂಧಿಸಿದಂತೆ ಯಾವುದೇ ಟೆಸ್ಟ್ ಗಳನ್ನ ಮಾಡದೆ ಸುಳ್ಳು ನೆಗೆಟಿವ್ ವರದಿ ನೀಡ್ತಿದ್ದ ಇಬ್ಬರನ್ನ ಬಂಧಿಸಲಾಗಿದೆ. ಸ್ಥಳೀಯ ನಿವಾಸಿ ನಾಗರಾಜ ಹಾಗೂ ರಾಜಸ್ಥಾನ್ ಮೂಲದ ಮುಕೇಶ ಸಿಂಗ್ ಬಂಧಿತ ಆರೋಪಿಗಳು.
ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಈ ಇಬ್ಬರು ಕೆಲಸ ಮಾಡ್ತಿದ್ರು. ಜನರಿಂದ 700 ರೂಪಾಯಿ ಪಡೆದು ಆರ್ ಟಿ-ಪಿಸಿಆರ್ ಮೂಲಕ ಸುಳ್ಳು ನೆಗೆಟಿವ್ ವರದಿ ನೀಡ್ತಿದ್ದರು. ಸಿಸಿಬಿ ದಳದ ವಿಶೇಷ ಅಧಿಕಾರಿಗಳು ಈ ಇಬ್ಬರನ್ನು ಬಂಧಿಸಿದ್ದಾರೆ.