ಪ್ರಜಾಸ್ತ್ರ ಫಲಶ್ರುತಿ: ಸಿಂದಗಿ ಆಸ್ಪತ್ರೆಯಲ್ಲಿ 2 ದಿನಗಳಿಂದ ಇದ್ದ ಮೃತದೇಹ ಅಂತ್ಯಕ್ರಿಯೆ

492

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಕಳೆದ ಏಪ್ರಿಲ್ 26ರಂದು ತಾಲೂಕು ಆಸ್ಪತ್ರೆಗೆ ಉಸಿರಾಟದ ತೊಂದರೆಯಿಂದ ದಾಖಲಾಗಿದ್ದ ವಸಂತ ಪ್ರಶಾಂತ ನಾಯಕ(37) ಅನ್ನೋ ವ್ಯಕ್ತಿ, ಏಪ್ರಿಲ್ 29ರಂದು ಸಾವನ್ನಪ್ಪಿದ್ದಾರೆ. ಆದ್ರೆ, ಎರಡು ದಿನಗಳಾದ್ರೂ ಮೃತ ವ್ಯಕ್ತಿಗೆ ಸಂಬಂಧಿಸಿದವರು ಯಾರೂ ಬಂದಿರ್ಲಿಲ್ಲ. ಈ ಬಗ್ಗೆ ಆಸ್ಪತ್ರೆಯ ಸಿಬ್ಬಂದಿ, ತಾಲೂಕು ಆಡಳಿತ ಸಾಕಷ್ಟು ಪ್ರಯತ್ನ ನಡೆಸಿದ್ರೂ ಯಾರೂ ಸಂಪರ್ಕಕ್ಕೆ ಸಿಕ್ಕಿಲ್ಲ.

ಮೃತ ವ್ಯಕ್ತಿ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ದರೂರುನವರು ಆಗಿದ್ದಾರೆ. ಮೊರಟಗಿಯ ಧಾಬಾವೊಂದರಲ್ಲಿ ಕೆಲಸಕ್ಕೆ ಬಂದಿದ್ರಂತೆ. ನಾಲ್ಕು ದಿನಗಳ ಹಿಂದೆ ಉಸಿರಾಟದ ತೊಂದರೆಯೆಂದು ಆಸ್ಪತ್ರೆಗೆ ದಾಖಲಾಗಿದ್ರು. ಮೃತ ವ್ಯಕ್ತಿಗೆ ಸಂಬಂಧಿಸಿದವರು ಯಾರೂ ಬಂದಿದ್ರಿಲ್ಲ. ಹೀಗಾಗಿ ಮೃತದೇಹ ಆಸ್ಪತ್ರೆಯಲ್ಲಿಯೇ ಇತ್ತು. ಇದ್ರಿಂದಾಗಿ ಇತರೆ ರೋಗಿಗಳು, ಸಿಬ್ಬಂದಿ ಭಯ ಹಾಗೂ ಆತಂಕದಲ್ಲಿದ್ರು.

ಈ ಬಗ್ಗೆ ‘ಪ್ರಜಾಸ್ತ್ರ’ ವರದಿ ಮಾಡಿದ ಕೆಲ ಗಂಟೆಗಳಲ್ಲೇ, ಅಧಿಕಾರಿಗಳು ಕೋವಿಡ್ ನಿಯಮಾವಳಿ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ವಿಷಯವನ್ನ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು, ಅವರ ಮಾರ್ಗದರ್ಶನದಂತೆ ಅಂತ್ಯಸಂಸ್ಕಾರ ಮಾಡಲಾಗಿದೆ.




Leave a Reply

Your email address will not be published. Required fields are marked *

error: Content is protected !!