ಪ್ರಜಾಸ್ತ್ರ ಸುದ್ದಿ
ಬೆಂಗಳೂರು: ಕುಟುಂಬ ರಾಜಕಾರಣ ವಿಚಾರ ಬಂದಾಗ ಪ್ರಾದೇಶಿಕ ಪಕ್ಷ ಜೆಡಿಎಸ್ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬರುತ್ತವೆ. ಈ ಬಗ್ಗೆ ಮಾತನಾಡಿರುವ ಜೆಡಿಎಸ್ ಮಾಜಿ ಸಚಿವ ಹೆಚ್.ಡಿ ರೇವಣ್ಣ, ಕುಟುಂಬ ರಾಜಕಾರಣದ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಲ್ ತೆಗೆದುಕೊಂಡು ಬರಲಿ ಎಂದರು.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರ, ಚುನಾವಣೆಯಲ್ಲಿ ಕುಟುಂಬದವರು ಸ್ಪರ್ಧಿಸಬಾರದು ಎಂದು ಬಿಲ್ ತೆಗೆದುಕೊಂಡು ಬರಲಿ. ಬೇಷರತ್ ಬೆಂಬಲ ನೀಡುತ್ತೇವೆ. ಆದರೆ, ದಿನ ಬೆಳಗಾದರೆ ದೇವೇಗೌಡರ ಕುಟುಂಬ ಹೆಸರು ತೆಗೆದುಕೊಂಡು ಮಾತನಾಡುತ್ತಾರೆ. ಯಾಕೆ ರಾಷ್ಟ್ರೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಬಿಲ್ ತರಲಿ. ನಾನು, ಕುಮಾರಸ್ವಾಮಿ ಬೆಂಬಲ ನೀಡುತ್ತೇವೆ. ರಾಜ್ಯಸಭೆಯಲ್ಲಿ ದೇವೇಗೌಡರು ಬೆಂಬಲ ನೀಡುತ್ತಾರೆ ಎಂದರು.