‘ಮಣಿಪುರ ಹಿಂಸಾಚಾರ ಮಾತನಾಡಲು ಹೃದಯಹೀನ ಸರ್ಕಾರಕ್ಕೆ ಏನು ಅಡ್ಡಿ?’

232

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಪ್ರಧಾನಿ ಮೋದಿ ಅವರು ಸಂಸತ್ತಿನಿಂದ ಕಾಣೆಯಾಗಿದ್ದಾರೆ. ಮಣಿಪುರ ಹಿಂಸಾಚಾರದ ಬಗ್ಗೆ ಚರ್ಚಿಸಲು ಹೃದಯಹೀನ ಸರ್ಕಾರಕ್ಕೆ ಏನು ಅಡ್ಡಿ ಎಂದು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.

ಮಣಿಪುರದಲ್ಲಿ ನಡೆದಿರುವ ಹಿಂಸಾಚಾರದ ಕುರಿತು ಪ್ರಧಾನಿ ಮೋದಿ ಮಾತನಾಡಬೇಕು ಎಂದು ವಿಪಕ್ಷಗಳು ಪಟ್ಟು ಹಿಡಿದಿವೆ. ಆದರೆ, ಇದನ್ನು ಸರ್ಕಾರ ತಿರಸ್ಕರಿಸಿದೆ. ಹೀಗಾಗಿ ಪ್ರಧಾನಿ ಮೋದಿಯನ್ನು ಲೋಕಸಭೆಗೆ ಕರೆತರಲ ಅವಿಶ್ವಾಸ ನಿರ್ಣಯ ಮಂಡನೆಯ ತಂತ್ರವನ್ನು ಹೆಣೆದಿದೆ.

ಇನ್ನು ಮಾನನಷ್ಟಮೊಕದ್ದಮ್ಮೆ ಪ್ರಕರಣದಿಂದ ನಿರಾಳತೆಯನ್ನು ಪಡೆದು ವಾಪಸ್ ಸಂಸತ್ತಿಗೆ ಬಂದಿರುವ ರಾಹುಲ್ ಗಾಂಧಿ, ಮಣಿಪುರದ ಘಟನೆ ಕುರಿತು ಸರ್ಕಾರದ ವಿರುದ್ಧ ಯಾವ ರೀತಿ ದಾಳಿ ಮಾಡುತ್ತಾರೆ ಅನ್ನೋ ಕುತೂಹಲ ಮೂಡಿದೆ.




Leave a Reply

Your email address will not be published. Required fields are marked *

error: Content is protected !!