ಗಣಿಹಾರದಲ್ಲಿ ರೈತ ಆತ್ಮಹತ್ಯೆ

478

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಗಣಿಹಾರ ಗ್ರಾಮದಲ್ಲಿ ರೈತನೊಬ್ಬ ಸಾಲದ ಸುಳಿಯಿಂದ ಹೊರ ಬರಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 35 ವರ್ಷದ ಸಿದ್ದಲಿಂಗಪ್ಪ ರೋಡಗಿ ಅನ್ನೋ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತನ್ನ ಜಮೀನಿನಲ್ಲಿ ಯಾರು ಇಲ್ಲದ ವೇಳೆ ವಿಷ ಸೇವಿಸಿ ರೈತ ಸಿದ್ದಲಿಂಗಪ್ಪ ರೋಡಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಿಂದಗಿಯ ಸಿಂಡಿಕೇಟ್ ಬ್ಯಾಂಕ್ ನಲ್ಲಿ 60 ಸಾವಿರ ಸೇರಿದಂತೆ ಕೈಗಡ 3 ಲಕ್ಷ ಸಾಲ ಮಾಡಿದ್ದ ಎಂದು ಹೇಳಲಾಗ್ತಿದೆ.

ಕರೋನಾ, ಮಳೆ ಅನಾಹುತದಿಂದ ಬೆಳೆ ನಾಶವಾಗಿದ್ರಿಂದ ಸಾಲ ತೀರಿಸಲು ಆಗಿಲ್ಲ. ಹೀಗಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗ್ತಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!