ಪ್ರಜಾಸ್ತ್ರ ಸುದ್ದಿ
ಸಿಂದಗಿ: ತಾಲೂಕಿನ ಅಂತರಂಗಿ ಗ್ರಾಮದಲ್ಲಿ ಜುಲೈ 1ರಂದು ಆತ್ಮಹತ್ಯೆ ಮಾಡಿಕೊಂಡ, ರೈತ ಶೇಖಪ್ಪ ದೇವಕಾತೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗಿದೆ. ಜಿ.ಆರ್ ಗ್ರೂಪ್ ಧಾರವಾಡ ಮುಖ್ಯಸ್ಥರಾದ ಶಿವಾನಂದ ಪಾಟೀಲ ಸೋಮಜಾಳ ಅವರು, ಇಂದು ಮೃತ ರೈತನ ಮನೆಗೆ ಭೇಟಿ ನೀಡಿ ನೆರವು ನೀಡಿದ್ರು.
ಶೇಖಪ್ಪ ಕುಟುಂಬಕ್ಕೆ ಸಾಂತ್ವಾನ ಹೇಳಿದ ಶಿವಾನಂದ ಪಾಟೀಲ ಸೋಮಜಾಳ ಅವರು, 20 ಸಾವಿರ ರೂಪಾಯಿ ಚೆಕ್ ನೀಡುವ ಮೂಲಕ ಮಾನವೀಯತೆ ಮೆರೆದ್ರು. ಈ ಮೂಲಕ ನೊಂದ ಕುಟುಂಬಕ್ಕೆ ಒಂದಿಷ್ಟು ಧೈರ್ಯ ತುಂಬಿದ್ರು.
ಇದೆ ವೇಳೆ ಗಾಣಿಗ ಸಮಾಜದ ಅಧ್ಯಕ್ಷ ಮಲ್ಲಣ್ಣಗೌಡ ಮನಗೂಳಿ, ಆನಂದ ರಾಠೋಡ, ಅಪ್ಪು ಹದಗಲ್, ಪ್ರಭು ಅಂಬಲಗಿ, ಭೀಮರಾಯ ಬಿರಾದಾರ, ಮಹಾಂತೇಶ ಪರಗೊಂಡ, ಪರಮಾನಂದ ಬಗಲಿ ಸೇರಿದಂತೆ ಮತ್ತಿತರು ಹಾಜರಿದ್ರು.