ಸಾಲದ ಸುಳಿಗೆ ಇಂಡಿಯಲ್ಲಿ ರೈತ ಬಲಿ

358

ಪ್ರಜಾಸ್ತ್ರ ಸುದ್ದಿ

ಇಂಡಿ: ಸಾಲದ ಸುಳಿಗೆ ಸಿಲುಕಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ನಡೆದಿದೆ. ರೈತ ಶರಣಬಸು ಗುರುಬಸಪ್ಪ ಹುಬ್ಬಳ್ಳಿ (48) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಏಪ್ರಿಲ್ 7 ರಂದು ವಿಷ ಸೇವಿಸಿದ್ದ, ತಕ್ಷಣ ಅವನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಿಸದೆ ಸೋಮವಾರ ಮೃತಪಟ್ಟಿದ್ದಾನೆ. ಬೆಳೆ ಹಾನಿ ಆಗಿದ್ರಿಂದ ಶರಣಬಸು ನೊಂದುಕೊಂಡಿದ್ದನಂತೆ. ಅಲ್ದೇ, ಜಮೀನಿನ ಹೆಸರಿನ್ಲಲಿ ಸುಮಾರು 10 ಲಕ್ಷ ರೂಪಾಯಿ ಸಾಲ ಮಾಡಿದ್ದು, ಅದನ್ನ ತೀರಿಸಲಾಗದೆ ವಿಷ ಕುಡಿದಿದ್ದಾನೆ ಎಂದು ಕುಟುಂಬಸ್ಥರು ಹೇಳ್ತಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!