ಕಡಣಿಯಲ್ಲಿ ರೈತ ಆತ್ಮಹತ್ಯೆ

320

ಪ್ರಜಾಸ್ತ್ರ ಸುದ್ದಿ

ಆಲಮೇಲ: ವಿಜಯಪುರ ಜಿಲ್ಲೆ ಆಲಮೇಲಪಟ್ಟಣದ ಕಡಣಿ ರಸ್ತೆಯಲ್ಲಿರುವ ಜಮೀನಿನಲ್ಲಿ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪುಂಡಲಿಂಗ ಜೇರಟಗಿ(22) ಎಂಬಾತ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಜಮೀನಿನಲ್ಲಿದ್ದ ಬೆಳೆ ಹಾಳಾದ ಕಾರಣ, ಜಮೀನಿನ‌ ಲೀಸ್ ಹಣ ಕೊಡಲಾಗದೆ ಹಾಗೂ‌ ಖಾಸಗಿಯಾಗಿ ಮಾಡಿದ ಸಾಲ‌ ಮರು ಪಾವತಿ ಮಾಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗ್ತಿದೆ. ಈ ಬಗ್ಗೆ ಆಲಮೇಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!