ಸಿಂದಗಿಯಲ್ಲಿ ರೈತ ಆತ್ಮಹತ್ಯೆ

340

ಪ್ರಜಾಸ್ತ್ರ ಸುದ್ದಿ

ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ರೈತ ಯಲ್ಲಾಲಿಂಗ ಹಣಮಂತ ತಳವಾರ(30) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನ್ನಾಪುರ ಗ್ರಾಮದ ಜಮೀನುವೊಂದರ ಹತ್ತಿರದ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ಮಂಗಳವಾರ ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯಂಕಂಚಿ ಗ್ರಾಮದಲ್ಲಿ ಮೃತ ಯಲ್ಲಾಲಿಂಗ ಹಾಗೂ ಕುಟುಂಬದ ಸದಸ್ಯರ ಹೆಸರಿನಲ್ಲಿ 4 ಎಕರೆ 35 ಗುಂಟೆ ಜಮೀನು ಇದೆ. ಇದರ ಮೇಲೆ ಯಂಕಂಚಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ನಲ್ಲಿ 3 ಲಕ್ಷ ರೂಪಾಯಿ ಬೆಳೆ ಸಾಲ ಮಾಡಿದ್ದಾನೆ.

ಈ ವರ್ಷ ಸರಿಯಾಗಿ ಬೆಳೆ ಬಾರದೆ ಇರುವುದರಿಂದ ಸಾಲ ತೀರಿಸಲು ಏನು ಮಾಡಬೇಕು ಎಂದು ಮಾನಸಿಕವಾಗಿ ನೊಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಅಂತಾ ಹೇಳಲಾಗಿದೆ ಈ ಬಗ್ಗೆ ಸಿಂದಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




Leave a Reply

Your email address will not be published. Required fields are marked *

error: Content is protected !!