ಪ್ರಜಾಸ್ತ್ರ ಸುದ್ದಿ
ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ ಶಾ ಎರಡು ದಿನಗಳ ಕರ್ನಾಟಕ ಪ್ರವಾಸದಲ್ಲಿ, ಭಾನುವಾರ ಬೆಳಗಾವಿಗೆ ಆಗಮಿಸ್ತಿದ್ದಾರೆ. ಹೀಗಾಗಿ ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ಮಾಡುವ ಮೂಲಕ, ಕರ್ನಾಟಕದಲ್ಲಿಯೂ ನೂತನ ಕೃಷಿ ಕಾನೂನುಗಳಿಗೆ ಬೆಂಬಲವಿಲ್ಲ ಅನ್ನೋದು ಕೇಂದ್ರಕ್ಕೆ ತಿಳಿಸುವ ಪ್ರಯತ್ನವಾಗಿದೆ.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಕಾರ್ಯಕರ್ತರು ನಗರದ ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಅಮಿತ ಶಾ ಹಠಾವೋ ದೇಶ ಬಚಾವೋ ಎಂದು ಧಿಕ್ಕಾರಗಳನ್ನ ಕೂಗುತ್ತಿದ್ದಾರೆ. ಇದೆ ವೇಳೆ ಅರಬೆತ್ತಲೆ ಉರುಳು ಸೇವೆಯನ್ನ ಮಾಡಿದ್ರು.
ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜನ ಸೇವಕ ಸಮಾವೇಶ ನಡೆಯಲಿದೆ. ಇದರಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಭಾಗವಹಿಸಿ ಮಾತ್ನಾಡಲಿದ್ದಾರೆ.