ಪ್ರಜಾಸ್ತ್ರ ಸುದ್ದಿ
ಜಿನಿವಾ: ಸಾಮಾಜಿಕ ಹೋರಾಟಗಾರ 84 ವರ್ಷದ ಸ್ವಾನಿ ಸ್ವಾಮಿ ಜೈಲಿನಲ್ಲಿ ಸಾವನ್ನಪ್ಪಿರುವುದಕ್ಕೆ ವಿಶ್ವ ಸಂಸ್ಥೆ ಆಘಾತ ವ್ಯಕ್ತಪಡಿಸಿದೆ. ಕಾನೂನು ವಿರೋಧಿ ಅಡಿಯಲ್ಲಿ ಕಳೆದ 9 ತಿಂಗಳ ಹಿಂದೆ ವಿಚಾರಣೆಯಲ್ಲಿದೆ ಬಂಧಿಸಲಾಗಿದೆ. ಜೈಲಿನಲ್ಲಿ ಸಾವನ್ನಪ್ಪಿದ್ದಕ್ಕೆ ದೇಶದ ತುಂಬಾ ಸರ್ಕಾರದ ವಿರುದ್ಧ ಕಿಡಿ ಕಾರಲಾಗಿದೆ.
ಪಾರ್ಕಿನ್ ಸನ್ಸ್ ಸೇರಿದಂತೆ ಹಲವು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಹೀಗಿದ್ರೂ ಅವರಿಗೆ ಜಾಮೀನು ನೀಡಿರ್ಲಿಲ್ಲ. ಅಲ್ದೇ, ಕಳೆದೊಂದು ವಾರದಿಂದ ಎದೆ ನೋವಿನಿಂದ ಬಳಲುತ್ತಿದ್ದರೂ ಅವರಿಗೆ ಜಾಮೀನು ನೀಡಿರ್ಲಿಲ್ಲ. ವಿದ್ಯಾರ್ಥಿಗಳನ್ನ, ಪತ್ರಕರ್ತರನ್ನ, ಹೋರಾಟಗಾರರನ್ನ ಬಂಧಿಸಲು ಮೋದಿ ಸರ್ಕಾರ ಕಾನೂನನ್ನ ಬಳಸಿಕೊಳ್ಳುತ್ತಿದೆ ಎಂದು ವಿಶ್ವ ಸಂಸ್ಥೆ ಕಿಡಿ ಕಾರಿದೆ.