ಪ್ರಜಾಸ್ತ್ರ ಸುದ್ದಿ
ಚಿಕ್ಕಮಗಳೂರು: ದಲಿತ ಯುವಕನಿಗೆ ಮೂತ್ರ ಕುಡಿಸಿದ ಗೋಣಿಬೀಡು ಪೊಲೀಸ್ ಠಾಣೆ ಪಿಎಸ್ಐ ಅರ್ಜುನ ಎಫ್ಐಆರ್ ದಾಖಲಿಸಲಾಗಿದೆ. ಮೂಡಿಗೆರೆ ತಾಲೂಕಿನ ಕಿರಗಂದ ಗ್ರಾಮದ ಯುವಕ ಪುನೀತ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಪುನೀತ ವಿರುದ್ಧ ವಿವಾಹಿತೆ ಮಹಿಳೆಗೆ ಕಾಟ ಕೊಡ್ತಿದ್ದ ಅನ್ನೋ ಆರೋಪವಿದೆ. ಹೀಗಾಗಿ ಆತನನ್ನ ಠಾಣೆಗೆ ಕರೆಸಲಾಗಿದೆ. ಈ ವೇಳೆ ಜಾತಿ ನಿಂದನೆ ಮಾಡಲಾಗಿದೆ ಹಾಗೂ ಮೂತ್ರ ಕುಡಿಸಲಾಗಿದೆ ಅನ್ನೋ ಆರೋಪ ಮಾಡಲಾಗಿದೆ. ಇದೀಗ ಯುವಕ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ.
ಪಿಎಸ್ಐ ಅರ್ಜನರನ್ನ ಎಸ್ಪಿ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಅಲ್ಲಿಗೆ ಮಹಿಳಾ ಪಿಎಸ್ಐ ಒಬ್ಬರನ್ನ ನೇಮಿಸಲಾಗಿದೆ. ಈ ಪ್ರಕರಣ ಸಂಬಂಧ ತನಿಗೆ ಡಿವೈಎಸ್ಪಿಯೊಬ್ಬರನ್ನ ಎಸ್ಪಿ ಎಂ.ಎಚ್ ಅಕ್ಷಯ ನೇಮಿಸಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಪಿಎಸ್ಐ ಅಮಾನತು ಮಾಡಬೇಕು ಅನ್ನೋ ಕೂಗು ವ್ಯಕ್ತವಾಗಿದೆ.