ಪ್ರಜಾಸ್ತ್ರ ಸುದ್ದಿ
ಮಂಗಳೂರು: ಇಂದಿನಿಂದ ದೇಶಿ ವಿಮಾನಯಾನ ಸೇವೆಗಳು ಶುರುವಾಗ್ತಿವೆ. ಮಹಾರಾಷ್ಟ್ರದಲ್ಲಿ ವಿಮಾನ ಹಾರಾಟ ಶುರುವಾಗ್ತಿದೆ. ಅದೇ ರೀತಿ ಕರ್ನಾಟಕದಲ್ಲಿ ಶುರು ಮಾಡ್ತಿದ್ದು, ಮಂಗಳೂರಿನಿಂದ ಮುಂಬೈಗೆ ವಿಮಾನ ಹಾರಾಟ ನಡೆಸಲಿದೆಯಂತೆ.
ಮಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಮಂಗಳೂರು-ಚೆನ್ನೈ ನಡುವೆ ಸ್ಪೈಸ್ ಜೆಟ್ ಹಾಗೂ ಏರ್ ಇಂಡಿಗೋ ತಮ್ಮ ವಿಮಾನ ಹಾರಾಟದ ವಿವಾರಗಳನ್ನ ಬಿಡುಗಡೆ ಮಾಡಿದೆ. ಹೀಗಾಗಿ ಮುಂಬೈ ಏರ್ ಪೋರ್ಟ್ ನಿಂದ ವಿಮಾನ ಹಾರಾಟ ಶುರು ಆಗಿವೆ.
ಇನ್ನು ವಿಮಾನದ ಪ್ರಯಾಣದ ಮೂಲಕ ಬರುವ ಪ್ರಯಾಣಿಕರಿಗೂ 7 ದಿನಗಳ ಕಾಲ ಸಂಸ್ಥಾ ಕ್ವಾರಂಟೈನ್ ಮಾಡಲಾಗುತ್ತೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ ಹೇಳಿದ್ದಾರೆ. ಆದ್ರೆ, ಕರೋನಾ ಸೋಂಕಿನ ಕೂಪವಾಗಿರುವ ಜನರನ್ನ ಕರೆದುಕೊಂಡು ಬಂದು, ಸಂಸ್ಥಾ ಕ್ವಾರಂಟೈನ್ ಮಾಡುವ ಜರೂರತ್ತ ಏನಿದೆ. ಬಡವರು ರಸ್ತೆ ಮೂಲಕ ಬರುವುದಕ್ಕೆ ಬ್ರೇಕ್ ಹಾಕಿರುವ ಸರ್ಕಾರ, ವಿಮಾನದ ಮೂಲಕ ಬರುವ ಶ್ರೀಮಂತರಿಗೆ ಅವಕಾಶ ಕೊಡುವುದು ಯಾವ ನ್ಯಾಯ ಅನ್ನೋದು ಗೊತ್ತಾಗ್ತಿಲ್ಲ.