ಬೆಂಗಳೂರು: ನಗರದ ಅರಣ್ಯ ಭವನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮಾರ ದಿನಾಚರಣೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪನವರು ಭಾಗಿಯಾಗಿದ್ರು. ಹುತಾತ್ಮರಿಗೆ ಈ ವೇಳೆ ಗೌರವ ಸಲ್ಲಿಸಿದ ಸಿಎಂ, ಕರ್ತವ್ಯದಲ್ಲಿದ್ದಾಗ ಹುತಾತ್ಮರಾಗುವ ಅರಣ್ಯ ಇಲಾಖೆ ಸಿಬ್ಬಂದಿ ಕುಟುಂಬಕ್ಕೆ ನೀಡಲಾಗ್ತಿರುವ 20 ಲಕ್ಷ ಪರಿಹಾರ ಮೊತ್ತವನ್ನ 30 ಲಕ್ಷಕ್ಕೆ ಏರಿಸಲಾಗುವುದು ಎಂದು ತಿಳಿಸಿದ್ರು.
ಪೊಲೀಸ್ ಇಲಾಖೆಗೆ ಸರಿಸಮನಾಗಿ, ಅರಣ್ಯ ಇಲಾಖೆ ಸಿಬ್ಬಂದಿಗಳನ್ನ ನೋಡಲಾಗುತ್ತೆ. ಹುತಾತ್ಮ ಸಿಬ್ಬಂದಿ ಕುಟುಂಬಗಳಿಗೆ ಪರಿಹಾರ ಹಾಗೂ ಅವರ ಕ್ಷೇಮಾಭಿವೃದ್ಧಿ ವಿಚಾರದಲ್ಲಿಯೂ ಸರ್ಕಾರ ಬದ್ಧವಾಗಿದೆ ಅಂತಾ ತಿಳಿಸಿದ್ರು. ರಾಜ್ಯದಲ್ಲಿ ಶೇಕಡ 22ರಷ್ಟು ಅರಣ್ಯ ಭೂಮಿ ಇರುವುದು ನೆಮ್ಮದಿಯ ವಿಷಯ. ಅರಣ್ಯ ರಕ್ಷಣೆಗಾಗಿ ಹಗಲಿರುಳು ಸೇವೆ ಸಲ್ಲಿಸ್ತಿರುವ ಸಿಬ್ಬಂದಿ ಕಾರ್ಯ ಶ್ಲಾಘನೀಯ ಅಂತಾ ಹೇಳಿದ್ರು.