ಪ್ರಜಾಸ್ತ್ರ ಕ್ರೀಡಾ ಸುದ್ದಿ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ, ಸಿಇಒ ಹಾಗೂ ಬಸ್ ಕ್ಲೀನರ್ ಗೆ ಕೋವಿಡ್ ಸೋಂಕು ತಗುಲಿದೆ. ಇದ್ರಿಂದಾಗಿ ಇತರೆ ಸದಸ್ಯರನ್ನ ಸಹ ಐಸೋಲೇಷನ್ ಮಾಡಲಾಗಿದೆ. ಹೀಗಾಗಿ ಬುಧವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನ ಮುಂದೂಡಲಾಗಿದೆ.
ಇಎಸ್ ಪಿಎನ್ ಕ್ರಿಕ್ ಇನ್ಫೋ ಪ್ರಕಾರ ಬಿಸಿಸಿಐ ಪಂದ್ಯವನ್ನ ಮುಂದೂಡಿದೆ. ಇನ್ನು ಕೆಕೆಆರ್ ತಂಡದಲ್ಲಿಯೂ ಇಬ್ಬರಿಗೆ ಸೋಂಕು ತಗುಲಿದ ಪರಿಣಾಮ ಸೋಮವಾರ ಆರ್ ಸಿಬಿ ವಿರುದ್ಧ ನಡೆಯಬೇಕಿದ್ದ ಪಂದ್ಯವನ್ನ ಸಹ ಮುಂದೂಡಿರುವುದನ್ನ ಇಲ್ಲಿ ನೆನಪಿಸಿಕೊಳ್ಳಬಹುದು.