ಚೈತ್ರಾ ಅನಾರೋಗ್ಯದ ರಹಸ್ಯ ಬಯಲು

431

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಬಿಜೆಪಿಯಿಂದ ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಚೈತ್ರಾ ಕುಂದಾಪುರ, ಅನ್ಯಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಇದರ ಹಿಂದಿನ ರಹಸ್ಯವನ್ನು ವೈದ್ಯರು ಬಯಲು ಮಾಡಿದ್ದಾರೆ.

ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಪ್ರತಿಯೊಂದು ಪರೀಕ್ಷೆಯಲ್ಲೂ ರಿಪೋರ್ಟ್ ನಾರ್ಮಲ್ ಬಂದಿದೆ. ಬಾಯಿಯಲ್ಲಿ ನೊರೆ ಬಂದಂತೆ ಮಾಡಿ ಫಿಟ್ಸ್ ಇರುವಂತೆ ಮಾಡಿರುವುದು ಚೈತ್ರಾ ಸೃಷ್ಟಿಸಿರುವ ಕಥೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯ ದಿವ್ಯಾ ಪ್ರಕಾಶ್ ಮಾತನಾಡಿ, ಫಿಟ್ಸ್ ಇಲ್ಲ. ಅದು ಅವರಾಗಿಯೇ ಮಾಡಿಕೊಂಡಿರುವುದು. ಫಿಟ್ಸ್ ಇತ್ತು ಎಂದು ಪತ್ತೆಗಾಗಿ ಎಂಐಆರ್, ಇಸಿಜಿ ಸ್ಕ್ಯಾನಿಂಗ್ ಮಾಡಲಾಗಿದೆ. ಎಲ್ಲವೂ ನಾರ್ಮಲ್ ಬಂದಿದ್ದು, ಫಿಟ್ಸ್ ಅಂಶ ಪತ್ತೆಯಾಗಿಲ್ಲ ಎಂದಿದ್ದಾರೆ. ಇದೀಗ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ಮುಂದುವರೆದಿದೆ. ಈ ವಂಚನೆ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ಯಾರಿಗೆಲ್ಲ ಹಣ ನೀಡಲಾಗಿದೆ ಅನ್ನೋದರ ತನಿಖೆ ನಡೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!