ಪ್ರಜಾಸ್ತ್ರ ಸುದ್ದಿ
ನವದೆಹಲಿ: ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆಯಲ್ಲಿ ರಾಜ್ ಘಾಟ್ ನಲ್ಲಿರುವ ಅವರ ಸ್ಮಾರಕಕ್ಕೆ ಪ್ರಧಾನಿ ಮೋದಿ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿ ನಮನ ಸಲ್ಲಿಸಿದ್ರು. ಇನ್ನು ಗಾಂಧಿ ಹಾಗೂ ಶಾಸ್ತ್ರಿ ಅವರ ಜನ್ಮ ದಿನದ ಪ್ರಯುಕ್ತ ಟ್ವೀಟ್ ಮೂಲಕ ಶುಭ ಕೋರಿದ್ದಾರೆ.
ಗಾಂಧೀಜಿ ಅವರ ಬದುಕು ಹಾಗೂ ಚಿಂತನೆಗಳಿಂದ ನಾವು ಸಾಕಷ್ಟು ಕಲಿಯುವುದಿದೆ ಎಂದಿದ್ದಾರೆ. ಇನ್ನು ಶಾಸ್ತ್ರಿ ಅವರು ಸರಳತೆ, ದೃಢ ವ್ಯಕ್ತಿಯಾಗಿದ್ರು. ದೇಶಕ್ಕಾಗಿ ಅವರು ಸಾಕಷ್ಟು ಶ್ರಮಿಸಿದ್ದಾರೆ ಎಂದು ಹೇಳುವ ಮೂಲಕ ಇಬ್ಬರು ನೇತಾರರಿಗೆ ನಮನ ಸಲ್ಲಿಸಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸ್ಮಾರಕಕ್ಕೆ ಭೇಟಿ ನೀಡಿದ್ರು. ಟ್ವೀಟರ್ ಮೂಲಕ ಜನ್ಮ ದಿನಕ್ಕೆ ಶುಭ ಕೋರಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸೇರಿದಂತೆ ಅನೇಕರು ನಮನ ಸಲ್ಲಿಸಿದ್ದಾರೆ.
ಇನ್ನು ವಿಜಯ್ ಘಾಟ್ ನಲ್ಲಿರುವ ಶಾಸ್ತ್ರಿ ಅವರು ಸ್ಮಾರಕಕ್ಕೆ ಅವರ ಮಕ್ಕಳಾದ ಸುನಿಲ ಶಾಸ್ತ್ರಿ ಹಾಗೂ ಅನಿಲ ಶಾಸ್ತ್ರಿ ಭೇಟಿ ನೀಡಿ ನಮನ ಸಲ್ಲಿಸಿದ್ರು.