ಗುಮ್ಮಟನಗರಿಯಲ್ಲಿ ಹೈವೇ ದರೋಡೆಕೋರರ ಬಂಧನ

394

ಪ್ರಜಾಸ್ತ್ರ ಸುದ್ದಿ

ವಿಜಯಪುರ: ಹೈವೇಗಳಲ್ಲಿ ಸಂಚರಿಸುವ ಲಾರಿಗಳಿಗೆ ಅಡ್ಡಗಟ್ಟಿ ದರೋಡೆ ನಡೆಸುತ್ತಿದ್ದ ಗ್ಯಾಂಗ್ ನ್ನ ವಿಜಯಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 9ಜನರ ತಂಡವನ್ನ ಬಂಧಿಸಲಾಗಿದೆ.

ಇತ್ತೀಚೆಗೆ ವಿಜಯಪುರದ ಮನಗೂಳಿ ಹತ್ತಿರದ ಎನ್ಎಚ್ 50ರಲ್ಲಿ ಲಾರಿಯೊಂದನ್ನ ಅಡ್ಡಗಟ್ಟಿ ದರೋಡೆ ನಡೆಸಿದ್ದ 9 ಜನ ಆರೋಪಿಗಳನ್ನ ಬಂಧಿಸಿದ್ದಾರೆ. ಸಂಗಮೇಶ ಅಗಸರ, ಬಸವರಾಜ ಮಡಿವಾಳರ, ಬಸವರಾಜ ಮೇಟಿ, ಶಿವಾನಂದ ಕಂಟೆ, ರವಿ ಬಿರಾದಾರ, ಭೀಮರಾವ ಅಗಸರ, ಶೇಖಪ್ಪ ಮಡಿವಾಳರ, ಬಸವರಾಜ ಬಿರಾದಾರ ಸೇರಿದಂದೆ ಓರ್ವ ಅಪ್ರಾಪ್ತ ಬಾಲಕನ್ನು ಮನಗೂಳಿ ಪೊಲೀಸರು ಬಂಧಿಸಿದ್ದಾರೆ.

ಇನ್ನು ಬಂಧಿತ ಆರೋಪಿಗಳು ಕೆಎ 19 ಎಎ 0267 ಲಾರಿ ಚಾಲಕನಿಂದ 1 ಲಕ್ಷ 28 ಸಾವಿರ ಹಾಗೂ ಮೊಬೈಲ್ ದರೋಡೆ ನಡೆಸಿದ್ದರು. ಅಲ್ಲದೇ, ಕೃತ್ಯಕ್ಕೆ ಬಳಸಿದ ಮಚ್ಚು, ಆಟೋರಿಕ್ಷಾ, ಬೈಕ್ ಸೇರಿದಂತೆ 89 ಸಾವಿರ ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಅನುಪಮ ಅಗರವಾಲ್ ತಿಳಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!