ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯ ವಿದ್ಯಾರ್ಥಿಯಾಗಿರುವ ದರ್ಶನ ಎಂ.ವಿ ಅವರು ಬರೆದ ಕವಿತೆ…
ಅವಕಾಶಕ್ಕಾಗಿ ಕಾಯುತಿರು ಅದೃಷ್ಟಕ್ಕಲ್ಲ
ನಂಬಿಕೆಯಿಂದ ಮುನ್ನಡೆ ಗುಂಪಿನಲ್ಲಲ್ಲ
ಗುರುತಿಸುವ ಮುನ್ನ ಗುರಿತಪ್ಪದಿರು
ಗುರುತಿಸಿದಾಗ ಕೆಳಗಿಳಿಯದಿರು
ಸವಾಲು ಸ್ವೀಕರಿಸು ಪರರ ಮೇಲಲ್ಲ
ನಿನ್ನ ಮೇಲೆ ನಿನ್ನ ಶಕ್ತಿ ಮೇಲೆ
ಹಗೆಯ ಸ್ವೀಕರಿಸು ಶಕ್ತನ ಮಾತಿಗಲ್ಲ
ನಿನ್ನ ಆಲಸ್ಯಕ್ಕೆ ನಿನ್ನ ದುರ್ಬಲಗಳಿಗೆ
ಕಲಿಕೆಯಲ್ಲಿ ಆಸಕ್ತಿ ಮೂಡುವುದು
ಕಲ್ಮಶಗಳು ತೊರೆದಾಗ ಕನಸ ಕಟ್ಟಿದಾಗ
ಮರಕ್ಕಿಂತ ಮರ ದೊಡ್ಡದಿರುವುದು
ಎಂಬ ಅದಮ್ಯ ಭಾವನೆ ಬೀಸಿದಾಗ
ಕಷ್ಟದಿಂದಿರದ ಗೆಲುವು ತೈಲವಿಲ್ಲದ ಹಣತೆಯಂತೆ
ಗುರಿ ಇಲ್ಲದ ದಾರಿ ಹದಿಹರೆಯದ ಮನದಂತೆ
ಶಕ್ತಿ ಇಲ್ಲದ ತೋಳು ಕುಂಡದ ಗಿಡದಂತೆ
ಕಷ್ಟಪಡು ಪರರ ಮಾತಿಗಲ್ಲ
ಗೆಲುವ ಸಂಭ್ರಮಿಸಲು